newsics.com
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾ.6) ತಮ್ಮ 17ನೇ ಬಜೆಟ್ನಲ್ಲಿ ಅಬಕಾರಿ ಇಲಾಖೆಯ ಆದಾಯ ಹೆಚ್ಚಿಸಲು ಹೊಸ ತಂತ್ರ ರೂಪಿಸಿದ್ದಾರೆ. ಮದ್ಯದ ಮೇಲೆ ವಿಧಿಸುವ ತೆರಿಗೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ರಾಜ್ಯದ ರಾಜಸ್ವ ಸಂಗ್ರಹವನ್ನು ಗಣನೀಯವಾಗಿ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಅಥವಾ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ವಿಧಿಸಲು ಸರ್ಕಾರ ತೀರ್ಮಾನಿಸಿದೆ.
ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹಂತ ಹಂತವಾಗಿ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.ಅದೇ ರೀತಿ ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಘೋಷಣೆಯಾಗಿದ್ದು, ಮದ್ಯದ ದರವನ್ನು ಉತ್ಪಾದಕರೇ ಹೆಚ್ಚಳ ಮಾಡಲಿದ್ದಾರೆ.
ದರ ಏರಿಕೆ ಅಂದಾಜು: ಈ ನಿರ್ಧಾರದಿಂದಾಗಿ ಕಡಿಮೆ ಬೆಲೆಯ ಮದ್ಯದ ಬಾಟಲಿಗಳ ಮೇಲೆ ಅಂದಾಜು 10 ರಿಂದ 20 ರೂ. ಹಾಗೂ ಪ್ರೀಮಿಯಂ ಮದ್ಯದ ಮೇಲೆ 50 ರಿಂದ 100 ರೂ. ವರೆಗೆ ದರ ಹೆಚ್ಚಾಗುವ ಸಾಧ್ಯತೆಯಿದೆ.
ಆದಾಯದ ಗುರಿ: ಅಬಕಾರಿ ಇಲಾಖೆಯಿಂದ ಈ ವರ್ಷ ಸುಮಾರು 45,000 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಬೃಹತ್ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.