Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಳಗಾವಿ : ಹೋಳಿ ಹಬ್ಬದ ಆಚರಣೆ ವೇಳೆ ಎಂಇಎಸ್ ಕಿರಿಕ್ ಮಾಡಿಕೊಂಡಿದ್ದು, ಮಹಾರಾಷ್ಟ್ರ ನಾಡ ಗೀತೆ ಹಾಡಿಗೆ ಯುವಕರು ಡ್ಯಾನ್ಸ್ ಮಾಡುವ ಮೂಲಕ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಮತ್ತೆ ಗುರಿಯಾಗಿರುವ ಘಟನೆ ಮಂಗವಾರ ಬೆಳಗಿಗೆ ಬಂದಿದೆ.
ಬೆಳಗಾವಿ ನಗರದ ಅನಗೋಳದ ರಾಜಹಂಸ ಗಲ್ಲಿಯಲ್ಲಿ ಹೋಳಿ ಹಬ್ಬದ ನಿಮಿತ್ಯ ಬಣ್ಣ ಆಡಲು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಜೈ ಮಹಾರಾಷ್ಟ್ರ ಎಂದು ಪೋಸ್ಟರ ಪ್ರದರ್ಶನ ಮಾಡುವುದರ ಮೂಲಕ ಜೊತೆಗೆ ಬೆಳಗಾವಿ ಮಹಾರಾಷ್ಟ್ರ ರಾಜ್ಯಕ್ಕೆ ಸೇರಬೇಕು ಮಹಾ ಪರ ಘೋಷಣೆ ಹಾಕಿ ಮಹಾರಾಷ್ಟ್ರ ನಾಡ ಗೀತೆ ಹಚ್ಚಿ ಡ್ಯಾನ್ಸ್ ಮಾಡಿದ್ದಾರೆ.
ಈ ಘಟನೆಯಿಂದ ಮತ್ತೆ ಬೆಳಗಾವಿ ನಗರದಲ್ಲಿ ಅಶಾಂತಿಯನುಂಟು ಮಾಡಿದ್ದಲ್ಲದೆ. ಕನ್ನಡಿಗರ ಕೆಂಗಣ್ಣಿಗೆ ಗುರಿ ಯಾಗಿರುವ ಘಟನೆಯು ಬೆಳಕಿಗೆ ಬಂದಿದೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹೋಳಿ ಹಬ್ಬ ಆಯೋಜಕರು ಹಾಗೂ ಹಾಡು ಹಚ್ಚಿದ್ದವರ ವಿರುದ್ದ ಮಹಾರಾಷ್ಟ್ರದ ಗೀತೆಗೆ ಡ್ಯಾನ್ಸ್ ಮಾಡಿದವರ ವಿರುದ್ದ ಕಾನೂನಿನ ಕ್ರಮ ಕೈಗೋಳ್ಳುವಂತೆ ಕನ್ನಡಪರ ಸಂಘಟನೆಗಳು ಆಗ್ರಹಸಿವೆ. ಹಾಗೂ ಪೊಲೀಸರು ಈ ಘಟನೆಯ ಕುರಿತು ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರು ಬೆಲೆ ಬಿಸಿದ್ದಾರೆ.
ಒಂದೇ ದಿನದಲ್ಲಿ ಶೇ.40ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಬೆಂಗಳೂರು ಐಟಿ ಕಂಪೆನಿ!