https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ಮಾತು ಬಾರದ ಕಿವಿ ಕೇಳದ ಅಂಗವಿಕಲನೊಬ್ಬನ ಹನಿಟ್ರ್ಯಾಪ್ ಗೆ ಯತ್ನಿಸಿ ಬಳಿಕ ಆತನ ಮೇಲೆ ಹಲ್ಲೆ ನೆಡೆಸಿದ ಪ್ರಕರಣ ಪಣಂಪಿಲ ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉತ್ತರ ಪರವೂರು ಮೂಲದ ಸಫ್ನಾ, ಆಕೆಯ ಪ್ರಿಯಕರ ಇರುಂಪನಂ ಮೂಲದ ಅಮಲ್, ಮರಡು ಮೂಲದ ಆನಂದ್ ಮತ್ತು ವೈಟ್ಟಿಲ ಮೂಲದ ಜಾನ್ ರಾಹುಲ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಕೊಚ್ಚಿ ಮೂಲದ ಸಂಜು ತಲೆಮರೆಸಿಕೊಂಡಿದ್ದಾನೆ. ಕ್ರೂರವಾಗಿ ಥಳಿಸಲ್ಪಟ್ಟ ಕೊಲ್ಲಂನ ನಳ್ಳಿಲ ಮೂಲದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವನಿಗೆ ಮಾತು ಬರುತ್ತಿಲ್ಲ, ಕಿವಿ ಕೇಳಿಸುತ್ತಿಲ್ಲ. ಆರೋಪಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಬೆತ್ತಲೆ ಮಾಡಿ ಫೋಟೋ ತೆಗೆಯುವ ಮೂಲಕ ಹಣ ವಸೂಲಿ ಮಾಡುವುದು ಆರೋಪಿಯ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಫ್ನಾ ಇನ್ಸ್ಟಾಗ್ರಾಮ್ ಮೂಲಕ ಯುವಕನನ್ನುಪರಿಚಯ ಮಾಡಿಕೊಂಡಿದ್ದಳು, ಅಲ್ಲದೆ ಮತ್ತೊಬ್ಬ ಆರೋಪಿ ಅಮಲ್ ಆಗಾಗ್ಗೆ ಸಫ್ನಾ ಎಂಬ ಹೆಸರಿನಲ್ಲಿ ಯುವಕನನ್ನು ಸಂಪರ್ಕಿಸುತ್ತಿದ್ದಎಂದು ತಿಳಿದುಬಂದಿದೆ. ನಂತರ, ಸಫ್ನಾ ಮತ್ತು ಹನಿಟ್ರ್ಯಾಪ್ ಗೆ ಒಳಗಾದ ಯುವಕ ಫೆಬ್ರವರಿ 22 ರಂದು ವೈಪೀನ್ ಬೀಚ್ನಲ್ಲಿ ಭೇಟಿಯಾಗಲು ನಿರ್ಧರಿಸಿದರು, ಆದರೆ ಯುವತಿ ಆತನನ್ನು ಪಣಂಪಳ್ಳಿ ನಗರದ ಹೋಟೆಲ್ಗೆ ಕರೆದಳು. ಆರೋಪಿಗಳಲ್ಲಿ ಮೂವರು ಹೊರಗೆ ಮತ್ತು ಇಬ್ಬರು ಕೋಣೆಯ ಶೌಚಾಲಯದಲ್ಲಿ ಅಡಗಿಕೊಂಡಿದ್ದರು.
ಯುವಕನೊಂದಿಗೆ ಸಫ್ನಾ ಇರುವ ಅಸಭ್ಯ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುವುದು ಇವರ ಉದ್ದೇಶವಾಗಿತ್ತು. ಯುವಕ ಬಟ್ಟೆ ಬಿಚ್ಚಲು ಮತ್ತು ಅಸಭ್ಯ ಕೃತ್ಯಗಳಲ್ಲಿ ತೊಡಗಲು ನಿರಾಕರಿಸಿದಾಗ, ಗ್ಯಾಂಗ್ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಯುವಕನ ಮುಖಕ್ಕೆ ಗುದ್ದಿ, ಬೆನ್ನಿಗೆ ಒದ್ದು ಕ್ರೂರವಾಗಿ ನಡೆದುಕೊಳ್ಳಲಾಗಿದೆ. ದೊಡ್ಡ ಟಾರ್ಚ್ನಿಂದ ಆತನ ತಲೆಗೆ ಹೊಡೆಯಲು ಯತ್ನಿಸಿದಾಗ, ಯುವಕ ಕೈ ಅಡ್ಡಹಿಡಿದು ಬಚಾವಾಗಿದ್ದಾನೆ. ಆದರೆ ಆತನ ಕೈಗೆ ತೀವ್ರ ಗಾಯಗಳಾಗಿವೆ.
ಬಳಿಕ ಆರೋಪಿಗಳು ಯುವಕನ ಗೂಗಲ್ ಪೇ ಮೂಲಕ ಹಣ ಪಡೆಯಲು ಯತ್ನಿಸಿದ್ದಾರೆ. ಈ ವೇಳೆ ಅದರಲ್ಲಿ ಬ್ಯಾಲೆನ್ಸ್ ಇಲ್ಲದ ಕಾರಣ ಕೊನೆಗೆ ಯುವಕನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಸಿ ಕಳುಹಿಸಿದ್ದರು. ಪೊಲೀಸರು ಆರೋಪಿಗಳ ಫೋನ್ ವಶಪಡಿಸಿಕೊಂಡಿದ್ದು, ಡಿಲೀಟ್ ಆಗಿರುವ ಫೋಟೋಗಳನ್ನು ರಿಕವರಿ ಮಾಡುವ ಪ್ರಯತ್ನದಲ್ಲಿದ್ದಾರೆ.
ಬೆನ್ನುಮೂಳೆಯ ಗಾಯದಿಂದ ಬಳಲುತ್ತಿದ್ದ ಯುವಕ ಫೆಬ್ರವರಿ 24 ರಂದು ದೂರು ನೀಡಿದ್ದಾನೆ. ಯುವಕನಿಗೆ ಮಾತು ಬಾರದ ಕಾರಣ, ಸಂಜ್ಞಾ ಭಾಷಾ ತಜ್ಞರ ಸಹಾಯದಿಂದ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಹಲ್ಲೆ, ಸುಲಿಗೆ ಮತ್ತು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ.