https://youtube.com/shorts/iPk0YEWO1t8?si=tOj6kwL_UdC2E5Z8
Subscribe ನ್ಯೂಸಿಕ್ಸ್ ಕನ್ನಡ
newsics.com
ಭೋಪಾಲ್ನಲ್ಲಿ 61 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ 81 ವರ್ಷದ ನೇತ್ರತಜ್ಞೆ ಹೇಮಲತಾ ಶ್ರೀವಾಸ್ತವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಅವರು ಹಠಾತ್ ಅಸ್ವಸ್ಥರಾದ ಸಮಯದಲ್ಲಿ ಆಸ್ತಿ ದಾನ ಮಾಡಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಸಾವು ಅನುಮಾನ ಮೂಡಿದೆ.
ಹೇಮಲತಾ ಅವರ ಹುಟ್ಟುಹಬ್ಬ ಜನವರಿ 12ರಂದು ಇತ್ತು. ಹೇಮಲತಾ ತಮ್ಮ ಮಗನ ಸ್ನೇಹಿತ ಡಾ. ಸುಮಿತ್ ಜೈನ್ ಮತ್ತು ಅವರ ಪತ್ನಿ ಪ್ರಾಚಿ ಜೈನ್ ಅವರೊಂದಿಗೆ ಕೇಕ್ ಕತ್ತರಿಸುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ಈ ಘಟನೆ ನಡೆದು ಎರಡು ದಿನಗಳ ನಂತರ, ಅವರ ಆರೋಗ್ಯ ಹದಗೆಟ್ಟಿದೆ. ಜನವರಿ 15 ರ ಹೊತ್ತಿಗೆ, ಅವರ ಸ್ಥಿತಿ ಗಂಭೀರವಾಗಿತ್ತು. ಈ ದಿನಗಳಲ್ಲಿ ಒಂದು ದಿನ, ರೈಟ್ ಟೌನ್ನಲ್ಲಿ 11,000 ಚದರ ಅಡಿ ಭೂಮಿಯನ್ನು ಡಾ. ಸುಮಿತ್ಗೆ ದಾನ ಮಾಡುವ ದಾಖಲೆಗಳಿಗೆ ಅವರು ಸಹಿ ಹಾಕಿದರು ಎನ್ನಲಾಗಿದ್ದು ಈ ವಿಚಾರ ಈಗ ವಿವಾದಕ್ಕಿಡಾಗಿದೆ. ಹೇಮಲತಾ ತಮ್ಮ ಮಗ ಹಾಗೂ ಪತಿಯ ಹೆಸರಿನಲ್ಲಿ ಅವರ ಸ್ಮರಣಾರ್ಥ ಆಸ್ಪತ್ರೆ ನಿರ್ಮಿಸಲು ಸ್ವಯಂಪ್ರೇರಣೆಯಿಂದ ಭೂಮಿಯನ್ನು ದಾನ ಮಾಡಿದ್ದಾರೆ ಎಂದು ಸುಮಿತ್ ಹೇಳಿದ್ದಾರೆ.
ವೈದ್ಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇಲ್ಲದೇ ಇದ್ದ ಸಮಯದಲ್ಲಿ ಬೆದರಿಕೆ ಹಾಗೂ ಒತ್ತಡ ಹಾಕಿ ಅವರಿಂದ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘವು ಆರೋಪಿಸಿದೆ. ಈ ನಡುವೆ, ಗಾಯತ್ರಿ ಮಂದಿರ ಎಂಬ ಟ್ರಸ್ಟ್ ಮುಂದೆ ಬಂದು, ವೈದ್ಯರು ಸಂಪೂರ್ಣ ಆಸ್ತಿಯನ್ನು ತಮಗೆ ನೀಡಲು ಬಯಸಿದ್ದಾರೆಂದು ಹೇಳಿಕೊಂಡಿದೆ. ಹೇಮಲತಾ ಅವರ ಸಹೋದರಿಯರಲ್ಲಿ ಒಬ್ಬರಾದ ಕನಕ್ ಲತಾ ಮಿಶ್ರಾ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆದರೂಮತ್ತೊಬ್ಬ ಸಹೋದರಿ ಶಾಂತಿ ಮಿಶ್ರಾ ಅವರು ಹೇಮಲತಾ ಅವರ ದೇಹವನ್ನು ಸ್ವೀಕರಿಸಿದ್ದು, ಆಸ್ತಿಯ ಮೇಲೆ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಮುಂದೆ ಬಂದಿದ್ದಾರೆ.
ಆಸ್ತಿ ವಿವಾದ ತೀವ್ರಗೊಳ್ಳುತ್ತಿದ್ದಂತೆ, ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಅವರು ನಿರ್ಣಾಯಕ ವಿಚಾರ ಬಹಿರಂಗಪಡಿಸಿದ್ದು, ಈಗ ಎಲ್ಲರೂ ಹಕ್ಕು ಸಾಧಿಸುತ್ತಿರುವ ಭೂಮಿ ಪುರಸಭೆಯ ಗುತ್ತಿಗೆಯಲ್ಲಿದೆ ಮತ್ತು ಅದನ್ನು ಕಾನೂನುಬದ್ಧವಾಗಿ ಬೇರೆಯವರಿಗೆ ದಾನ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಮರಣಕ್ಕೂ ಮೊದಲು ನೀಡಿದ ಹೇಳಿಕೆಯಲ್ಲಿ ಡಾ. ಹೇಮಲತಾ ಅವರು ಆಸ್ತಿಯನ್ನು ದಾನ ಮಾಡಿಲ್ಲ ಮತ್ತು ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.
ವೈದ್ಯೆ ಹೆಮಲತಾ ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ಧಾರ್ಮಿಕ ಗುಂಪಿಗೆ ಸೇರಿದ ವ್ಯಕ್ತಿಗಳು ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂಬ ವರದಿಗಳು ಪ್ರಕರಣದ ಅನುಮಾನವನ್ನು ಮತ್ತಷ್ಟು ಹಚ್ಚಿಸಿವೆ. ನೆರೆಹೊರೆಯವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಿಗೆ ಎಲ್ಲಿ ಚಿಕಿತ್ಸೆ ನೀಡಲಾಯಿತು, ಯಾವ ಔಷಧಿಗಳನ್ನು ನೀಡಲಾಯಿತು ಮತ್ತು ಅವರ ಆರೋಗ್ಯ ಏಕೆ ಬೇಗನೆ ಹದಗೆಟ್ಟಿತು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
https://www.newsics.com/2026/02/18/this-summer-in-karnataka-is-scorching-hot/