https://youtube.com/shorts/Z1cy8EQaCVE?si=-_cWMt02yPVoM0xd
Subscribe ನ್ಯೂಸಿಕ್ಸ್ ಕನ್ನಡ
newsics.com
ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.ಉದ್ಯಮಿ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತಾದರೂ ಈ ಬಗ್ಗೆ ಪ್ರಕರಣ ದಾಖಲಿಸುವಷ್ಟು ಸಾಕ್ಷ್ಯಗಳೂ ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿಲ್ಲ.
ಪ್ರಕರಣ ಸಂಬಂಧ ತನಿಖೆಗೆ ಡಿಐಜಿ ಮತ್ತು ಎಸ್ಪಿ ಹಂತದ ಅಧಿಕಾರಿಗಳನ್ನೊಳಗೊಂಡ ಎಸ್ಐಟಿ ತಂಡ ರಚನೆ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದರು. ಎಸ್ಐಟಿ ಇಷ್ಟು ದಿನಗಳ ಕಾಲ ನಡೆಸಿರುವ ತನಿಖೆ ವೇಳೆ FIR ದಾಖಲಿಸು ಅಗತ್ಯವಿರುವ ಕನಿಷ್ಠ ಸಾಕ್ಷ್ಯವೂ ದೊರೆತಿಲ್ಲ ಎನ್ನಲಾಗಿದೆ.
ಅಸಲಿಗೆ ತನಿಖೆ ವೇಳೆ ಸಿ.ಜೆ.ರಾಯ್ ಆತ್ಮಹತ್ಯೆಗೆ ಇಂತಹ ವ್ಯಕ್ತಿ ಅಥವಾ ಸಂಸ್ಥೆ ಪ್ರಚೋದನೆ ನೀಡಿದೆ ಎಂದು ಸಾಭೀತು ಮಾಡಬಹುದಾದ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಯ್ ಡೈರಿಯಲ್ಲಿಯೂ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.
ಜೊತೆಗೆ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ದಿನದಂದು ಐಟಿ ಅಧಿಕಾರಿಗಳು ಅವರ ವಿಚಾರಣೆಯನ್ನು ನಡೆಸಿಯೇ ಇಲ್ಲ. ಹೀಗಾಗಿ ವಿಚಾರಣೆ ಹೆಸರಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ರಾಹ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುವುದೂ ಕಷ್ಟಸಾಧ್ಯ. ಅಲ್ಲದೆ ಹಲವಾರು ಬಾರಿ ಅದಾಗಲೇ ರಾಯ್ ಐಟಿ ವಿಚಾರಣೆಯನ್ನೂ ಎದುರಿಸಿದ್ದು, ಹಿಂದೆ ಆ ಸಮಯದಲ್ಲಿ ಅವರು ಯಾವುದೇ ದುಡುಕಿನ ನಿರ್ಧಾರ ಮಾಡಿರಲಿಲ್ಲ. ಹೀಗಾಗಿ ಅತ್ಮಹತ್ಯೆಗೆ ಪ್ರಚೋದನೆಯಾಗಿಲ್ಲ ಎಂಬ ಲೆಕ್ಕಾಚಾರದಲ್ಲಿ ಎಸ್ಐಟಿ ಇದೆ.
https://www.newsics.com/2026/02/13/bnp-wins-in-bangladesh-modi-congratulates-tariq-rahman/