Subscribe ನ್ಯೂಸಿಕ್ಸ್ ಕನ್ನಡ
newsics.com
ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾಗ ಪತಿ ತನ್ನ ಹಳೇ ಪ್ರೇಯಸಿ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ರಾಮದುರ್ಗ ತಾಲೂಕಿನ ಮಲ್ಲಾಪುರ ಬಳಿ ನಡೆದಿದೆ.
ಮಲ್ಲಾಪುರದ ಜಗದೀಶ್ ಕವಳೇಕರ(27), ಗಂಗಮ್ಮ(26) ಆತ್ಮಹತ್ಯೆಗೆ ಶರಣಾದ ಜೋಡಿ ಎಂದು ತಿಳಿದು ಬಂದಿದೆ.
ಮೃತ ಜಗದೀಶ್ ಕೌಳೇಕರ್ ಕಳೆದ ಒಂದು ವರ್ಷದ ಹಿಂದೆ ಗೀತಾ ಎಂಬಾಕೆ ಜೊತೆ ಮದುವೆಯಾಗಿದ್ದನು. ಹೆರಿಗೆಗಾಗಿ ಪತ್ನಿ ಗೀತಾಳನ್ನು ಆಕೆಯ ತವರು ಮನೆಗೆ ಜಗದೀಶ್ ಕಳುಹಿಸಿದ್ದನು. ಹೆಂಡತಿಯನ್ನು ತವರು ಮನೆಗೆ ಕಳುಹಿಸಿದ್ದ ಜಗದೀಶ್ ತನ್ನ ಹಳೆ ಪ್ರಿಯತಮೆ ಗಂಗಮ್ಮಳನ್ನು ಮನೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದ್ದು, ಇದೀಗ ಮಲಪ್ರಭಾ ನದಿಯಲ್ಲಿ ಶವವಾಗಿ ಇಬ್ಬರು ಪತ್ತೆಯಾಗಿದ್ದಾರೆ.
ಮದುವೆಯಾಗುವ ಮುಂಚೆ ಜಗದೀಶ್ ಮತ್ತು ಗಂಗಮ್ಮ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಈ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆ ಜಗದೀಶ್ ಹಾಗೂ ಗಂಗಮ್ಮ ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಂಡಿದ್ದರು. ನಂತರ ಜಗದೀಶ್, ಪಕ್ಕದ ಊರಾದ ಬೋಜಬಾಳ ಗ್ರಾಮದ ಗೀತಾ ಎಂಬಾಕೆಯ ಜೊತೆ ಮದುವೆ ಮಾಡಿಕೊಂಡಿದ್ದನು.
ಆದ್ರೆ ಗೀತಾ ಜೊತೆ ಮದುವೆಯಾಗಿದ್ದರೂ ಜಗದೀಶ್ ತನ್ನ ಹಳೆ ಲವರ್ ಗಂಗಮ್ಮ ಜೊತೆ ಪ್ರೀತಿ ಮುಂದುವರಿಸಿದ್ದನು. ಕಳೆದ ಎರಡು ದಿನಗಳ ಹಿಂದೆ ಗಂಗಮ್ಮಳನ್ನ ಮನೆಗೆ ಕರೆದುಕೊಂಡು ಬಂದಿದ್ದನು. ಆದ್ರೀಗ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಸ್ಥಳಕ್ಕೆ ರಾಮದುರ್ಘ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.