Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪ್ರತಿ ಭಾರತೀಯ ಅಡುಗೆ ಮನೆಯಲ್ಲೂ ಕಂಡು ಬರುವ ಮಸಾಲೆ ಲವಂಗ. ಇದು ಖಾದ್ಯದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ದಿವ್ಯೌಷಧ. ಮಾತ್ರವಲ್ಲ, ವೈದಿಕ ಜ್ಯೋತಿಷ್ಯದಲ್ಲಿ ಲವಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪೂಜೆ ಸಮಯದಲ್ಲಿ ಅದರಲ್ಲೂ ನವರಾತ್ರಿ ಪೂಜೆಯಲ್ಲಿ ಲವಂಗವನ್ನು ದೇವರಿಗೆ ಅರ್ಪಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಇನ್ನು ಲವಂಗವನ್ನು ಮಲಗುವಾಗ ದಿಂಬಿನ ಕೆಳಗೆ ಇಡುವುದರಿಂದ ಇದು ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಸಹಕರಿಸುತ್ತದೆ. ಮಾತ್ರವಲ್ಲ, ಇದು ವ್ಯಕ್ತಿಯ ಅದೃಷ್ಟವನ್ನೇ ಬದಲಿಸಲಿದ್ದು ಬಹುಬೇಗ ಶ್ರೀಮಂತರಾಗುವ ಯೋಗವನ್ನು ನೀಡುತ್ತದೆ ಎನ್ನಲಾಗುತ್ತದೆ.
ಮೂರು ಶುಕ್ರ ವಾರಗಳ ಕಾಲ ಮಾಡಿಕೊಳ್ಳಬೇಕಾಗುತ್ತದೆ ಮೊದಲಿಗೆ ಮೂರ್ನಾಲ್ಕು ಲವಂಗಗಳನ್ನು ತೆಗೆದುಕೊಳ್ಳಬೇಕು.ಇದನ್ನು ಕೆಂಪು ಬಟ್ಟೆಯಲ್ಲಿ ಗಂಟು ಕಟ್ಟಿ ಶುಕ್ರವಾರದ ದಿವಸ ಮಲಗುವ ಮುನ್ನ ನಿಮ್ಮ ದಿಂಬಿನ ಕೆಳಗೆ ಇರಿಸಿ ಮಲಗಬೇಕು. ನಂತರ ಆ ಲವಂಗವನ್ನು ಮಾರನೆ ದಿವಸ ಅಂದರೆ ಶನಿವಾರದ ದಿವಸದಂದು ಮಧ್ಯಾಹ್ನ ಹನ್ನೆರಡು ಗಂಟೆಗಳ ಒಳಗೆ ಆ ಲವಂಗವನ್ನು ತೆಗೆದುಕೊಂಡು ಹೋಗಿ ಅರಳಿ ಮರದ ಬುಡಕ್ಕೆ ಹಾಕಿಬರಬೇಕು.
ಸಾಧ್ಯವಾದಲ್ಲಿ ಈ ಪರಿಹಾರವನ್ನು ಅಂದರೆ ಶನಿವಾರದ ದಿವಸದಂದು ಆ ಲವಂಗವನ್ನು ಅರಳಿಮರದ ಬಳಿ ಹಾಕಿ ಬರುವ ಸಮಯ ಸೂರ್ಯೋದಯಕ್ಕೂ ಮುನ್ನವೇ ಲವಾಂಗವನ್ನು ಹಾಕಿ ಬಂದರೆ ಇನ್ನೂ ಒಳ್ಳೆಯದು.
ನಂತರ ಮನೆಗೆ ಬಂದು ಮನೆಯನ್ನು ಶುಭ್ರಗೊಳಿಸಿ ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಿಕೊಳ್ಳಬೇಕು. ಇದೇ ರೀತಿ ಮೂರು ಶುಕ್ರವಾರ ಗಳ ಕಾಲ ಈ ಪರಿಹಾರವನ್ನು ಪಾಲಿಸಬೇಕಾಗುತ್ತದೆ.
ನಿಮ್ಮ ಜೀವನದಲ್ಲಿ ಹಣಕಾಸಿನ ತೊಂದರೆಗಳು ಅಥವಾ ನೀವು ಕೊಟ್ಟ ಹಣ ನಿಮಗೆ ವಾಪಸ್ಸು ಬರುತ್ತಾ ಇಲ್ಲ ಅನ್ನುವುದಾದರೆ ಹಾಗೆ ನೀವು ದುಡಿದು ತಂದ ಹಣ ವ್ಯರ್ಥವಾಗಿ ಖರ್ಚಾಗುತ್ತ ಇದೆ ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ .
ಅನ್ನುವುದಾದರೂ ಕೂಡ, ಈ ಲವಂಗದ ಪರಿಹಾರದಿಂದ ಈ ಸಮಸ್ಯೆಗಳು ಪರಿಹಾರವಾಗುತ್ತವೆ. ಅಷ್ಟೇ ಅಲ್ಲ ಈ ಪರಿಹಾರವನ್ನು ಪಾಲಿಸುವುದರಿಂದ ಆರೋಗ್ಯಕರ ಲಾಭಗಳು ಕೂಡ ಇದೆ ಯಾರಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತದೆ ಅಂಥವರಿಗೂ ಕೂಡ ಒಳ್ಳೆಯ ಆರೋಗ್ಯಕರ ಪ್ರಯೋಜನಗಳು ಲಭಿಸುತ್ತವೆ.
https://www.newsics.com/2026/01/22/murder-of-a-newborn-baby-born-before-marriage/