Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಂಕ್ರಾಂತಿ ಹಬ್ಬ ಎಂದರೆ ಹಿಂದೂ ಗಳಿಗೆ ವಿಶೇಷ ಹಬ್ಬಗಳಲ್ಲಿ ಒಂದು. ಪ್ರಕೃತಿಯಲ್ಲಾಗುವ ಬದಲಾವಣೆ ಹಾಗೂ ರೈತ ತನ್ನ ಬೆಳೆಯ ಫಸಲನ್ನು ಪಡೆದು, ಮನೆಗೆ ತರುವಂತಹ ವಿಶೇಷವಾದ ದಿನ. ಈ ದಿನದಂದು ಪವಿತ್ರವಾದ ಧಾರ್ಮಿಕ ಪದ್ಧತಿ ಹಾಗೂ ಆಚರಣೆಯನ್ನು ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದ ಆಚರಣೆಯ ಪ್ರಕಾರ ಎಳ್ಳು ಬೆಲ್ಲವನ್ನು ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಳ್ಳುವುದರ ಮೂಲಕ ಸವಿಯಲಾಗುವುದು.
ಎಳ್ಳು ಬೆಲ್ಲದ ಸಂಯೋಜನೆಯು ಪೂರ್ವಜರ ಕಾಲದಿಂದಲೂ ರೂಢಿಯಲ್ಲಿ ಇರುವ ಒಂದು ವಿಧ. ಇದರಲ್ಲಿ ಇರುವ ವೈಜ್ಞಾನಿಕ ಮತ್ತು ಧಾರ್ಮಿಕ ಶಕ್ತಿಯು ವ್ಯಕ್ತಿಯ ಜೀವನದಲ್ಲಿ ಶುಭವನ್ನು ತರುವುದು ಎನ್ನುವ ನಂಬಿಕೆಯಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಂಕ್ರಾಂತಿಯ ಆಚರಣೆಯ ಸಮಯದಲ್ಲಿ ಮನೆಗೆ ಬಂದ ಅತಿಥಿಗಳಿಗೆ ಎಳ್ಳು ಬೆಲ್ಲವನ್ನು ನೀಡುತ್ತಾರೆ.
ಜೊತೆಗೆ ಎಳ್ಳು ಬೆಲ್ಲವನ್ನು ತಿಂದು ಒಳ್ಳೊಳ್ಳೆ ಮಾತನಾಡಿ ಎಂದು ಪರಸ್ಪರ ಶುಭ ಕೋರುವರು. ಎಳ್ಳಿನಲ್ಲಿ ಇರುವ ಆರೋಗ್ಯಕರವಾದ ಎಣ್ಣೆಯಂಶ ಮತ್ತು ಬೆಲ್ಲದಲ್ಲಿ ಇರುವ ಕಬ್ಬಿಣಾಂಶವು ದೇಹಕ್ಕೆ ಶಕ್ತಿ ಹಾಗೂ ಪೋಷಣೆಯನ್ನು ನೀಡುತ್ತದೆ. ಬದಲಾದ ಚಳಿಯ ವಾತಾವರಣಕ್ಕೆ ನಮ್ಮ ದೇಹವು ಹೊಂದಿಕೊಳ್ಳಲು ಸಜ್ಜಾಗುವುದು ಎಂದು ಹೇಳಲಾಗುತ್ತದೆ
ಆಯುರ್ವೇದದಲ್ಲಿ ಎಳ್ಳಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಎಳ್ಳೆಣ್ಣೆ ಬಳಸಲಾಗುವುದು. ತಲೆ ಕೂದಲಿನಿಂದ ಹಿಡಿದು ಒಡೆದ ಚರ್ಮ, ಒಡೆದ ಕಾಲುಗಳಿಗೆ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಅಲ್ಸರ್, ಕಣ್ಣು, ಮಲಬದ್ಧತೆ ಹೀಗೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು. ಅತಿಯಾದ ಚಳಿಯಿಂದಾಗಿ ರಕ್ತ ಸಂಚಾರ ಸಮಸ್ಯೆ ಹೆಚ್ಚು. ದೇಹವನ್ನು ಬೆಚ್ಚಗಿಡುವ ಮೂಲಕ ರಕ್ತ ಸಂಚಾರ ಸುಗಮಗೊಳಿಸುತ್ತದೆ.
ಬೆಲ್ಲದಲ್ಲಿನ ಆಂಟಿಯಾಕ್ಸಿಡಂಟ್ ಕೂಡ ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಈ ಮಿಶ್ರಣ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎನ್ನಲಾಗಿದೆ.
https://www.newsics.com/2026/01/14/are-ads-on-mobile-phones-annoying/