Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಲಿತ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ಪಾಪಿ ತಂದೆ ಗರ್ಭಿಣಿ ಮಗಳನ್ನೆ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಯುವತಿ ಮತ್ತು ಯುವಕ ಪೋಷಕರ ವಿರೋಧದ ನಡುವೆ ಕಳೆದ ಏಳು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪೊಲೀಸರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯಾಗಿದ್ದರು, ಯುವತಿ ಮತ್ತು ಯುವಕ ಮದುವೆಯ ನಂತರ ಪ್ರಾಣಭಯದಿಂದ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಕಳೆದ ಡಿಸೆಂಬರ್ 8ರಂದು ಯುವತಿ ಮತ್ತು ವಿವೇಕಾನಂದ ಊರಿಗೆ ಮರಳಿದ್ದರು.
ಆದ್ರೆ ಭಾನುವಾರ ಸಂಜೆ ಮರಾಠಿಯ ಸೈರಾಟ್ ಚಿತ್ರದ ಮಾದರಿಯಂತೆ ಮನೆಗೆ ಬಂದು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಗೆ ಪೈಪ್ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ 19 ವರ್ಷದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
https://www.newsics.com/2025/12/21/sirsi-shri-marikamba-fair-from-feb-24-to-mar-4/