Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಿದ್ದು, ಇದೇ ವೇಳೆ ಸ್ಪರ್ಧಿಗಳಿಗೆ ಎಲಿಮಿನೇಷನ್ ಶಾಕ್ ಕೂಡ ಕಾದಿದೆ ಎಂದು ಹೇಳಲಾಗುತ್ತಿದೆ.
ಈ ವಾರ ಎಲಿಮಿನೇಶನ್ ನಡೆಯುತ್ತಿಲ್ಲ. ಮನೆಯಲ್ಲಿದ್ದವರು ಎಲಿಮಿನೇಶನ್ ನಡೆಯಲಿದೆ ಎಂದುಕೊಂಡಿದ್ದರು. ಆದರೆ ಜಿಯೋಹಾಟ್ಸ್ಟಾರ್ ಆಪ್ನಲ್ಲಿ ವೋಟಿಂಗ್ ಲೈನ್ಸ್ ಒಪನ್ ಆಗಿಲ್ಲ. ಹೀಗಾಗಿ ಎಲಿಮಿನೇಶನ್ ನಡೆಯೋದಿಲ್ಲ ಎನ್ನೋದು ಪಕ್ಕಾ ಆಯ್ತು.
ಅಂದಹಾಗೆ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ಅವರು ದೊಡ್ಮನೆಗೆ ಅತಿಥಿಗಳಾಗಿ ಬಂದು, ವೈಲ್ಡ್ಕಾರ್ಡ್ ಸ್ಪರ್ಧಿಗಳಾಗಿದ್ದಾರೆ. ಇವರು ಕೂಡ ಈ ವಾರ ಹೊರಗಡೆ ಹೋಗ್ತಾರೆ, ಇವರು ನಿಜಕ್ಕೂ ಸ್ಪರ್ಧಿಗಳೇ ಅಲ್ಲ ಎನ್ನುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಅವರು ಈ ವಾರ ಇರಲಿದ್ದಾರಾ? ಇಲ್ಲವಾ ಎನ್ನೋದು ಕಾದು ನೋಡಬೇಕಿದೆ.
ಈಗ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಇವರು ಮನೆಯಿಂದ ಹೊರಗಡೆ ಬರೋದಿಲ್ಲ. ಹೌದು, ಏಕಕಾಲಕ್ಕೆ ಈ ಖಡಕ್ ಸ್ಪರ್ಧಿಗಳು ಮನೆಯಿಂದ ಹೊರಬಂದು ಸೀಕ್ರೆಟ್ ರೂಮ್ನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಇದು ನಿಜವೋ? ಗಾಳಿ ಸುದ್ದಿಯೋ?