Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮದುವೆಗೂ ಮುನ್ನ ವರ ಕಾರು ಮತ್ತು 20 ಲಕ್ಷ ರೂಪಾಯಿಯ ವರದಕ್ಷಿಣೆಯ ಬೇಡಿಕೆ ಇಟ್ಟಿದ್ದ. ಇಬ್ಬರ ಜೀವನದಲ್ಲಿ ಸಂತೋಷದ ದಿನವಾಗಬೇಕಾಗಿದ್ದುದು ಆತಂಕ ಹುಟ್ಟುಹಾಕಿತ್ತು. ಬ್ರೀಝಾ ಕಾರು ಮತ್ತು ಹಣವನ್ನು ಕೊಡುವಂತೆ ಒತ್ತಾಯಿಸಿದ ವರ, ಎರಡನ್ನೂ ನೀಡುವವರೆಗೆ ತಾಳಿ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದ.
ತನ್ನ ಕುಟುಂಬ ಸದಸ್ಯರು ಅಸಹಾಯಕರಾಗಿರುವುದನ್ನು ನೋಡಿದ ವಧು ಮದುವೆಯನ್ನು ಮುಂದುವರಿಸಲು ನಿರಾಕರಿಸಿದಳು. ಈ ವರದಕ್ಷಿಣೆ ದುರಾಸೆಯ ಜನರನ್ನು ನಾನು ಮದುವೆಯಾಗಲು ಬಯಸುವುದಿಲ್ಲ. ನನ್ನ ಕುಟುಂಬವನ್ನು ಗೌರವಿಸದ, ನನ್ನ ತಂದೆ ಮತ್ತು ಸಹೋದರನನ್ನು ಎಲ್ಲಾ ಅತಿಥಿಗಳ ಮುಂದೆ ಅವಮಾನಿಸುವ ಹುಡುಗನೊಂದಿಗೆ ನಾನು ನನ್ನ ಜೀವನವನ್ನು ಕಳೆಯಲು ಸಾಧ್ಯವಿಲ್ಲ. ನಾನು ಈ ದುರಾಸೆಯ ವ್ಯಕ್ತಿಯೊಂದಿಗೆ ವಿವಾಹ ಪ್ರತಿಜ್ಞೆ ಮಾಡುವುದಿಲ್ಲ ಎಂದು ಆಕೆ ಹೇಳಿದ್ದಾಳೆ.
ಪೊಲೀಸರು ವರ ಮತ್ತು ಆತನ ಸೋದರ ಮಾವನನ್ನು ವಶಕ್ಕೆ ಪಡೆದಿದ್ದಾರೆ. ಗಮನಾರ್ಹವಾಗಿ, ವಧುವಿನ ಕಡೆಯಿಂದ ಯಾವುದೇ ದೂರು ದಾಖಲಾಗಿಲ್ಲ. ಮೇ ತಿಂಗಳಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಧುವಿನ ಕುಟುಂಬ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈ ಖರ್ಚುಗಳ ಜೊತೆಗೆ, ವರನಿಗೆ ಚಿನ್ನದ ಉಂಗುರ, ಸರ ಮತ್ತು ಐದು ಲಕ್ಷ ರೂಪಾಯಿ ನಗದು ಕೂಡ ಕೊಟ್ಟಿದ್ದಾರೆ.
https://x.com/Benarasiyaa/status/1999858967699497411?s=20