Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಏಳನೇ ತರಗತಿ ವಿದ್ಯಾರ್ಥಿಯ ಮೇಲೆ ಕೈನಿಂದ ಕೆನ್ನೆಗೆ ಬಾರಿಸಿದ ಆರೋಪದಡಿ ಬೆಂಗಳೂರಿನಲ್ಲಿ ಖಾಸಗಿ ಶಾಲೆಯ ಪಿಟಿ ಟೀಚರ್ ಮೇಲೆ ಎಫ್ಐಆರ್ ದಾಖಲಾಗಿದೆ.
ರಾಜೇಶ್ ಹಲ್ಲೆ ಮಾಡಿದ ಖಾಸಗಿ ಶಾಲೆಯ ಟೀಚರ್. ಸ್ಟಾಫ್ ರೂಮ್ನಲ್ಲಿ ಶಿಕ್ಷಕರ ಮುಂದೆ ಶಿಕ್ಷಕ ರಾಜೇಶ್ ಹಲ್ಲೆ ನಡೆಸಿದ್ದು, ಬಾಲಕನ ಕೆನ್ನೆ ಉದಿಕೊಂಡಿದೆ.
ಮಗ ಮನೆಗೆ ಬಾರದ ಕಾರಣ ಬಾಲಕನ ತಂದೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಲೆಯಲ್ಲಿ ಏನೋ ತಪ್ಪು ಮಾಡಿದ್ದಕ್ಕೆ ಹೊಡೆದಿರುವುದು ತಂದೆಯ ಗಮನಕ್ಕೆ ಬಂದಿದೆ.
ನಂತರ ಶಾಲೆಯಿಂದ ಬಾಲಕನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಬಾಲಕನ ತಂದೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಸದ್ಯ ಶಿಕ್ಷಕನನ್ನು ಬಂಧಿಸಿದ್ದಾರೆ.
Marriage matter ಇನ್ನೂ ಮದುವೆಯಾಗಿಲ್ವಾ ಎಂದು ಕೇಳಿದವನನ್ನು ಬಡಿದು ಕೊಂ*ದೇಬಿಟ್ಟ!