Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ದಾವಣಗೆರೆ: ಈಶ್ವರ ದೇವರ ಚಿತ್ರವಿರುವ ಫ್ಲೆಕ್ಸ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿದ್ದರಿಂದ ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದಲ್ಲಿ ಕೆಲಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದಿದ್ದಾರೆ.
ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವದ ಅಂಗವಾಗಿ ಈಶ್ವರನ ಭಾವಚಿತ್ರದ ಫ್ಲೆಕ್ಸ್ ಹಾಕಲಾಗಿತ್ತು. ಶುಕ್ರವಾರ ತಡರಾತ್ರಿ ಯಾರೋ ಕಿಡಗೇಡಿಗಳು ಫ್ಲೆಕ್ಸ್ಗೆ ಬೆಂಕಿ ಹಚ್ಚಿ ಕೆಲ ಭಾಗ ಸುಟ್ಟು, ಫ್ಲೆಕ್ಸ್ ಹರಿದಿದ್ದರು. ಇದು ಬೆಳಗಿನ ಜಾವ ಗಮನಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ಈ ಕುರಿತು ಪೊಲೀಸರಿಗೂ ದೂರು ನೀಡಿದರು. ಸ್ಥಳಕ್ಕೆ ಧಾವಿಸಿದ ಹೊನ್ನಾಳಿ ಪೊಲೀಸರು, ತನಿಖೆ ನಡೆಸಿ ಶಂಕೆಯ ಮೇಲೆ ಅನ್ಯ ಕೋಮಿನ ಯುವಕನನ್ನು ವಶಕ್ಕೆ ಪಡೆಯುವ ಜತೆಗೆ, ಊರ ಕಮಾನು ಸ್ಥಳದಲ್ಲಿ ಹಾಕಿದ್ದ ಅನ್ಯಕೋಮಿನ ಹಸಿರು ಧ್ವಜ ಸಹ ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಕಿಚ್ಚ ಸುದೀಪ್ ʼಮಾರ್ಕ್ʼ ಟ್ರೇಲರ್ ರಿಲೀಸ್ಗೆ ಡೇಟ್, ಟೈಮ್ ಫಿಕ್ಸ್