Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗುವಾಹಟಿ: ಕಳೆದ ತಿಂಗಳು ಸಿಂಗಾಪುರದಲ್ಲಿ ನಡೆದ ಖ್ಯಾತ ಗಾಯಕ ಜುಬೀನ್ ಗರ್ಗ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವನ್ನು ಪಡೆದುಕೊಂಡಿದೆ.
ಜುಬೀನ್ ಅವರು ಸೆಪ್ಟೆಂಬರ್ 09 ರಂದು ಸಿಂಗಪುರದ ಸೇಂಟ್ ಜೋನ್ಸ್ ದ್ವೀಪದಲ್ಲಿ ಲೈಫ್ ಜಾಕೆಟ್ ಇಲ್ಲದೆ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದರು. ಆದರೆ ಜುಬೀನ್ ಅವರಿಗೆ ವಿಷ ಉಣಿಸಿ ಸಾಯಿಸಲಾಗಿದೆ ಎಂಬ ಅನುಮಾನಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದವು.
ಈ ಪ್ರಕರಣ ಬಗ್ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದು, ಜುಬೀನ್ ಅವರ ಸಾವು ಅಪಘಾತ ಅಲ್ಲ ಅದೊಂದು ಪೂರ್ವ ಯೋಜಿತ ಕೊಲೆ ಎಂದು ಹೇಳಿದ್ದಾರೆ. ಜುಬೀನ್ ಗರ್ಗ್ ಅವರ ಸಾವಿನ ಕುರಿತು ವಿಶೇಷ ತನಿಖೆಗೆ ಆದೇಶಿಸಲಾಗಿದ್ದು ಸೆಕ್ಷನ್ 61, 105 ಮತ್ತು 106ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಸ್ಸಾಂ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದಾಗಲೆ ಇದು ಅಪಘಾತವಲ್ಲ ಇದೊಂದು ಕೊಲೆ ಎಂಬುದು ಅವರಿಗೆ ತಿಳಿದು ಬಿಟ್ಟಿತ್ತು ಎಂದು ಹಿಮಂತ್ ಬಿಸ್ವ ಶರ್ಮಾ ಹೇಳಿದ್ದಾರೆ.
ಜುಬೀನ್ ಗರ್ಗ್ ಅವರು ನಾರ್ತ್ ಈಸ್ಟ್ ಇಂಡಿಯಾ ಫೆಸ್ಟ್ನಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದರು. ಖಾಸಗಿ ಯಾಚ್ನಲ್ಲಿ ಸೇಂಟ್ ಜೋನ್ಸ್ ದ್ವೀಪಕ್ಕೆ ತೆರಳಿದ್ದ ಗರ್ಗ್ ಅವರು ಸಮುದ್ರದಲ್ಲಿ ಈಜುವ ಸಮಯದಲ್ಲಿ ಮುಳುಗಿದ್ದರು. ಆ ವೇಳೆ ಅವರು ಜಾಕೆಟ್ ಧರಿಸಿರಲಿಲ್ಲ. ಗರ್ಗ್ ಸಾವಿನ ಬಳಿಕ ಸುಮಾರು 60 ಪ್ರಕರಣಗಳು ಅವರ ಸಾವಿನ ಕುರಿತು ದಾಖಲಾಗಿದ್ದವು. ಅಸ್ಸಾಂ ಸರ್ಕಾರವು ಎಸ್ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು.