Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾವನಗರ: ಗುಜರಾತ್ನ ಅರಣ್ಯ ಸಂರಕ್ಷಣಾಧಿಕಾರಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಮಾಡಿ ಅವರ ಶವವನ್ನು ಅವರ ನಿವಾಸದ ಸಮೀಪವೇ ಹೂತು ಹಾಕಿದ ಘಟನೆ ಗುಜರಾತ್ನ ಭಾವನಗರದಲ್ಲಿ ನಡೆದಿದೆ.
ನಾಲ್ಕು ವರ್ಷದಿಂದ ಇದ್ದ ಅಕ್ರಮ ಸಂಬಂಧಕ್ಕಾಗಿ ಪತ್ನಿ ಮಕ್ಕಳನ್ನೇ ಕೊಂದಿದ್ದು, ಸದ್ಯ ಆರೋಪಿ ಶೈಲೇಶ್ ಖಂಭ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೈಲೇಶ್ ಖಂಭ್ಲಾ ತನ್ನ 40 ವರ್ಷದ ಪತ್ನಿ ನಯನಾ, 13 ವರ್ಷದ ಮಗಳು ಪ್ರೀತಾ ಮತ್ತು 9 ವರ್ಷದ ಮಗ ಭವ್ಯ ಎಂಬುವರನ್ನು ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳುವ ಸಲುವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಶೈಲೇಶ್ ಖಂಭ್ಲಾ ತನ್ನ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. 2022ರಲ್ಲಿ ಆ ಮಹಿಳಾ ಅರಣ್ಯ ಸಿಬ್ಬಂದಿಯನ್ನು ಪರಿಚಯ ಮಾಡಿಕೊಂಡಿದ್ದ. ಅವರ ಸ್ನೇಹವು ಪ್ರೇಮಕ್ಕೆ ತಿರುಗಿತ್ತು. ಆ ಪ್ರೇಮದ ಉಳಿವಿಗಾಗಿ ಆತ ಕೊಲೆ ಮಾಡಿದ್ದಾನೆ. ಈ ಕೃತ್ಯದಲ್ಲಿ ಆ ಮಹಿಳೆಯ ಪಾತ್ರವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಆರೋಪಿ ಅರಣ್ಯಾಧಿಕಾರಿ ಇತ್ತೀಚೆಗಷ್ಟೇ ಭಾವನಗರಕ್ಕೆ ವರ್ಗಾವಣೆಗೊಂಡಿದ್ದ. ಆದರೆ ಪತ್ನಿ ನಯನಾ, 13 ವರ್ಷದ ಮಗಳು ಪ್ರೀತಾ ಮತ್ತು 9 ವರ್ಷದ ಮಗ ಭವ್ಯ ಸೂರತ್ನಲ್ಲಿ ವಾಸಿಸುತ್ತಿದ್ದರು. ಅವರು ರಜೆಗಾಗಿ ಭಾವನಗರಕ್ಕೆ ಬಂದಿದ್ದರು. ಅಲ್ಲಿಗೆ ಬಂದ ಕೆಲವೇ ಸಮಯಕ್ಕೇ ಇಡೀ ಕುಟುಂಬವೇ ಕಾಣೆಯಾಗಿತ್ತು. ಇದಕ್ಕೆ ಸಂಬಂಧಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಪೊಲೀಸರಿಗೆ ದೂರು ಕೊಟ್ಟರು.
ತಾನು ಕರ್ತವ್ಯದಲ್ಲಿದ್ದಾಗ ತನ್ನ ಪತ್ನಿ ಮತ್ತು ಮಕ್ಕಳು ಆಟೋ-ರಿಕ್ಷಾದಲ್ಲಿ ಹೊರಟು ಹೋಗುವುದನ್ನು ತನ್ನ ಸೆಕ್ಯುರಿಟಿ ಗಾರ್ಡ್ ನೋಡಿದ್ದಾನೆಂದು ಹೇಳಿ ಖಂಭ್ಲಾ ಪೊಲೀಸರಿಗೆ ಶೈಲೇಶ್ ಖಂಭ್ಲಾ ದೂರು ನೀಡಿದ್ದ. ಆದರೆ, ಭದ್ರತಾ ಸಿಬ್ಬಂದಿ ಈ ಹೇಳಿಕೆ ಸುಳ್ಳು ಎಂದು ನಿರಾಕರಿಸಿದ್ದ.
ಪತ್ನಿ ಮಕ್ಕಳು ಕಾಣೆಯಾದ ಬಗ್ಗೆ ಪೊಲೀಸರು ವಿಚಾರಣೆ ನಡೆಸುವಾಗ ಶೈಲೇಶ್ ಖಂಭ್ಲಾ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದನಂತೆ. ಕುಟುಂಬ ಕಾಣೆಯಾದ ಬಗ್ಗೆ ಕಿಂಚಿತ್ತೂ ಕಾಳಜಿ ಇರದಿರುವುದನ್ನು ಕಂಡು ಪೊಲೀಸರಿಗೆ ಈತನ ಬಗ್ಗೆ ಅನುಮಾನವನ್ನು ಹೆಚ್ಚಿಸಿದೆ.
ಹೀಗಾಗಿ ಪೊಲೀಸರು ಖಂಭ್ಲಾನ ಕರೆ ವಿವರಗಳನ್ನು ಪಡೆದರು. ಇದರಲ್ಲಿ ಅವರು ಗಿರೀಶ್ ವಾನಿಯಾ ಎಂಬ ಕಿರಿಯ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ. ಕಸವನ್ನು ಸುರಿಯಲು ತನ್ನ ಮನೆಯ ಹಿಂದೆ ಎರಡು ಗುಂಡಿಗಳನ್ನು ತೋಡುವಂತೆ ಆರೋಪಿ ವಾನಿಯಾಗೆ ಹೇಳಿದ್ದಾನೆ. ವಾನಿಯಾ ನವೆಂಬರ್ 2 ರಂದು ಗುಂಡಿಗಳನ್ನು ತೋಡಿದ್ದ. ನಾಲ್ಕು ದಿನಗಳ ನಂತರ, ಒಂದು ‘ನೀಲಗಾಯ್’ ಗುಂಡಿಗೆ ಬಿದ್ದಿದೆ, ಅದನ್ನು ಮುಚ್ಚಬೇಕು ಎಂದು ಹೇಳಿ ಗುಂಡಿಗಳನ್ನು ತುಂಬಲು ಡಂಪರ್ ಟ್ರಕ್ ಕಳುಹಿಸುವಂತೆ ಆರೋಪಿ ವಾನಿಯಾಗೆ ತಿಳಿಸಿದ್ದ ಎನ್ನಲಾಗಿದೆ.
ನವೆಂಬರ್ 16 ರಂದು ಪೊಲೀಸರು ಕಸ ಹಾಕಲು ತೋಡಿದ್ದ ಗುಂಡಿಗಳಿಂದ ಆರೋಪಿಯ ಪತ್ನಿ ಮತ್ತು ಮಕ್ಕಳ ಶವಗಳನ್ನು ಹೊರತೆಗೆದರು. ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಆರೋಪಿ ಮತ್ತು ಆತನ ಪತ್ನಿಯ ನಡುವಿನ ವೈವಾಹಿಕ ಕಲಹವೇ ಈ ಅಪರಾಧಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಭಾವನಗರಕ್ಕೆ ಬಂದ ಪತ್ನಿ ಮತ್ತು ಮಕ್ಕಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆ ನಂತರ ಆರೋಪಿ ತನ್ನ ಪತ್ನಿಯ ಫೋನ್ನಿಂದ ತನಗೆ ನಾನು ಬೇರೆಯವರೊಂದಿಗೆ ಬದುಕಲು ಹೋಗುತ್ತಿದ್ದೇನೆ ಎಂದು ಸಂದೇಶ ಕಳುಹಿಸಿಕೊಂಡಿದ್ದ. ನಂತರ ಆ ಫೋನ್ ಅನ್ನು ಏರೋಪ್ಲೇನ್ ಮೋಡ್ಗೆ ಹಾಕಿದ್ದನಂತೆ.
ಪತ್ನಿಗೆ ಅರಣ್ಯಾಧಿಕಾರಿ ಅಮ್ಮ ಮತ್ತು ತಂದೆಯೊಂದಿಗೆ ಸೂರತ್ನಲ್ಲಿ ವಾಸಿಸಲು ಇಷ್ಟವಿರಲಿಲ್ಲವಂತೆ. ಭಾವನಗರದಲ್ಲಿ ಆರೋಪಿ ಒಟ್ಟಿಗೆ ವಾಸಿಸಬೇಕೆಂದು ಒತ್ತಾಯಿಸುತ್ತಿದ್ದರಂತೆ. ಆದರೆ, ಆ ಬೇಡಿಕೆಯನ್ನು ವಿರೋಧಿಸುತ್ತಿದ್ದ ಎನ್ನಲಾಗಿದೆ.
ಕಾರ್ಮಿಕ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ; 4 ಹೊಸ ಕಾರ್ಮಿಕ ಕಾನೂನು ಜಾರಿ, ಏನೆಲ್ಲಾ ಬದಲಾವಣೆ?
ಮದುವೆಯಾಗಲೂ ಹೆಣ್ಣು ಕೊಡಲ್ಲ,ಯಾವುದೇ ಶುಭ ಸಮಾರಂಭಗಳಿಗೂ ಆಹ್ವಾನವಿಲ್ಲ!; ಈ ಹಳ್ಳಿಯಲ್ಲಿ 80 ಕುಟುಂಬಕ್ಕೆ ಬಹಿಷ್ಕಾರ