newsics.com
ಈ ವಾರವಿಡೀ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮದ ಜತೆಗೆ ಸದ್ದು -ಗದ್ದಲವೂ ಜೋರಾಗಿ ಆಗಿದೆ. ಒಂದು ಕಡೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನ ಇನ್ನೊಂದು ಕಡೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಅಬ್ಬರವೂ ಸದ್ದು ಮಾಡಿದೆ.
ಬಂದ ಮೊದಲ ವಾರದಲ್ಲೇ ರಘು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಿರುವುದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಕ್ಯಾಪ್ಟನ್ ಎನ್ನುವ ಕಾರಣಕ್ಕೆ ಗೌರವ ಕೊಟ್ಟಿದ್ದಾರೆ.
ಈ ವಾರ ಅತೀ ಹೆಚ್ಚು ಸದ್ದು ಮಾಡಿದ್ದು ಅಶ್ವಿನಿ ಗೌಡ ಅವರು. ಅವರ ಅತಿಯಾದ ವರ್ತನೆಯಿಂದ ಕೆಲವರಿಗೆ ಇಷ್ಟವಾಗಿಲ್ಲ. ಕಾವ್ಯ ಅವರಿಗೆ ʼಗಿಲ್ಲಿಗೆ ಬಕೆಟ್ ಹಿಡಿʼ ಎಂದು ಅಶ್ವಿನಿ ಹೇಳಿದ್ದರು. ಇದರ ಬಳಿಕ ರಘು ಕ್ಯಾಪ್ಪನ್ಸಿಗೆ ಅವರು ಧಿಕ್ಕಾರ ಹಾಕಿ, ಮನೆಯ ಕೆಲ ನಿಯಮಗಳನ್ನು ಉಲ್ಲಂಘಿಸಿದ್ದರು. ಕಳಪೆ ಸಿಕ್ಕಿದ್ರೂ ತಾನೇ ಹುಲಿ ಎಂದು ಅಬ್ಬರಿಸಿದ್ದರು.
ಇನ್ನು ಕಾಕ್ರೋಚ್ ಸುಧಿ ಅವರು ರಕ್ಷಿತಾ ಅವರಿಗೆ ʼನಿನ್ನೆ ಮೊನ್ನೆ ಬಂದ ಸೆಡೆʼ ಎಂದು ಮಾತನಾಡಿದ್ದು ಸದ್ದು ಮಾಡಿತ್ತು.
ಇದೇ ವಿಚಾರವಾಗಿ ಕಿಚ್ಚ ಮಾತನಾಡಿದ್ದಾರೆ, ʼಒಂದು ಮಾತು ವ್ಯಕ್ತಿಗಳನ್ನು ಗೆಲ್ಲಿಸುತ್ತದೆ. ಸ್ವಲ್ಪ ಎಡವಿದ್ರೂ ಅದೇ ಮಾತು ವ್ಯಕ್ತಿತ್ವಗಳನ್ನು ಸೋಲಿಸುತ್ತದೆ. ಜೋರಾದ ಮಾತು, ಮೃದುವಾದ ಮಾತು ಎಲ್ಲದರ ಮಧ್ಯ, ಸರಿಯಾದ ಮಾತು. ಯಾರ ಮಾತು ಸರಿಯಾಗಿತ್ತು. ಯಾರಾರ ಮಾತು ಸರಿಯಾಗಬೇಕಿತ್ತು ಎಂದು ಕಿಚ್ಚ ಸ್ಪರ್ಧಿಗಳ ವರ್ತನೆ ಕುರಿತು ಮಾತನಾಡಿದ್ದಾರೆ.
ಇನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿರುವ ರಿಷಾ, ಸೂರಜ್ ಹಾಗೂ ರಘು ಅವರ ಕುರಿತು ಮನೆ ಉಳಿದ ಸದಸ್ಯರು ಅಭಿಪ್ರಾಯ ನೀಡಬೇಕೆಂದು ಕಿಚ್ಚ ಹೇಳಿದ್ದಾರೆ.
ಇದಕ್ಕೆ ಜಾನ್ವಿ, ಅಶ್ವಿನಿ ಅವರು ರಿಷಾ ಅವರ ಕುರಿತು ನೆಗೆಟಿವ್ ಮಾತನಾಡಿದ್ದಾರೆ. “ನನಗೆ ರಿಷಾ ಅವರು ಪಾಸಿಟಿಬ್ ಅಂತ ಅನ್ನಿಸಿಲ್ಲ” ಎಂದು ಅಶ್ವಿನಿ ಹೇಳಿದ್ದಾರೆ.
“ಚಂದ್ರಪ್ರಭ, ಗಿಲ್ಲಿ ಅವರ ಜತೆ ತುಂಬಾ ಫನ್ನ್ ಆಗಿ ರಿಷಾ ಇರುತ್ತಾರೆ. ಆದರೆ ಅದು ನಮಗೆ ಮುಜುಗರ ತರುತ್ತದೆ” ಎಂದಿದ್ದಾರೆ. ಈ ಮಾತಿಗೆ ರಿಷಾ ಗರಂ ಆಗಿದ್ದಾರೆ. “ನೀವು ಆಡಿದಾಗ ಆಟ ಚೆನ್ನಾಗಿರುತ್ತದೆ. ನಮಗೂ ಅಸಹ್ಯ, ಥೂ ಅಂತ ಅನ್ನಿಸುತ್ತಿದೆ. ತಾಕತ್ ಏನು ಅಂತ ತೋರಿಸುತ್ತೀನಿ. ಎಪಿಸೋಡ್ ಮುಗಿಯಲಿ” ಎಂದಿದ್ದಾರೆ.
ಥೂ ಗೀ ಅಂತ ಹೇಳೋಕೆ ಬರಬೇಡಿ. ಮುಂದೆ ಹೇಳೋಕೆ ದಮ್ಮಿಲ್ಲ. ಏನು ಮಾಡ್ತೀಯಾ ಎಪಿಸೋಡ್ ಆದ್ಮೇಲೆ. ಏನು ಧಮ್ಕಿ ಹಾಕ್ತೀಯಾ?” ಎಂದು ಜಾನ್ವಿ ಹೇಳಿದ್ದಾರೆ.
ಇಬ್ಬರ ವರ್ತನೆಯಿಂದ ವೀಕೆಂಡ್ನಲ್ಲೇ ದೊಡ್ಡ ರಾದ್ಧಾಂತ ಸೃಷ್ಟಿಯಾಗಿದೆ.
ನಟ ದರ್ಶನ್ ಗೆ ಜೈಲಿನಲ್ಲಿ ಸವಲತ್ತು ವಿಚಾರ: ವಿಚಾರಣೆ ಮುಕ್ತಾಯ; ಆದೇಶ ಕಾಯ್ದಿರಿಸಿದ ಕೋರ್ಟ್