Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Zodiac prediction ಇಂದು ಪ್ರೀತಿ ಯೋಗ, ಚತುರ್ಗ್ರಾಹಿ ಯೋಗ, 12 ರಾಶಿಗಳವರ ಆರ್ಥಿಕ ಪರಿಸ್ಥಿತಿ ಹೇಗಿದೆ?
ಈ ದಿನದಿನ ಭವಿಷ್ಯಪಂಚಾಂಗಪ್ರಮುಖ

Zodiac prediction ಇಂದು ಪ್ರೀತಿ ಯೋಗ, ಚತುರ್ಗ್ರಾಹಿ ಯೋಗ, 12 ರಾಶಿಗಳವರ ಆರ್ಥಿಕ ಪರಿಸ್ಥಿತಿ ಹೇಗಿದೆ?

Share
4 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಜ್ಯೋತಿಷ್ಯ ಶಾಸ್ತ್ರದಲ್ಲಿ ಅಕ್ಟೋಬರ್ 22 ಬುಧವಾರ ತುಂಬಾ ವಿಶೇಷವಾದ ದಿನ. ಈ ದಿನ ಗ್ರಹಗಳ ಸ್ಥಾನದಿಂದಾಗಿ ಹಲವಾರು ಯೋಗಗಳು ರೂಪುಗೊಳ್ಳುತ್ತವೆ.

ಕಟಕ ರಾಶಿಯಲ್ಲಿ ಗುರು, ಸಿಂಹ ರಾಶಿಯಲ್ಲಿ ಕೇತು, ಕನ್ಯಾ ರಾಶಿಯಲ್ಲಿ ಶುಕ್ರ, ತುಲಾ ರಾಶಿಯಲ್ಲಿ ಸೂರ್ಯನೊಂದಿಗೆ ಮಂಗಳ ಬುಧ ಚಂದ್ರ, ಕುಂಭದಲ್ಲಿ ರಾಹು, ಮೀನ ರಾಶಿಯಲ್ಲಿ ಶನಿ ಸಂಚಾರ ಮಾಡಲಿದೆ. ಈ ಗ್ರಹಗಳ ಸ್ಥಾನದಿಂದಾಗಿ ಪ್ರೀತಿ ಯೋಗ ಮತ್ತು ಚತುರ್ಗ್ರಾಹಿ ಯೋಗ ಸೃಷ್ಟಿಯಾಗುವುದು. ಈ ಶುಭ ಯೋಗಗಳು ಸಂಪತ್ತು, ಸಮೃದ್ಧಿ, ಸಕಲ ಸೌಕರ್ಯ ಹಾಗೂ ಅನುಕೂಲಕರ ಉದ್ಯೋಗ ಭಾಗ್ಯವನ್ನು ಕರುಣಿಸಲಿವೆ. ಹಾಗಾದರೆ ಈ ದಿನ 12 ರಾಶಿಗಳ ಹಣಕಾಸಿನ ಭವಿಷ್ಯ ಹೇಗಿದೆ

ಮೇಷ

ಈ ರಾಶಿಯವರಿಗೆ ಈ ದಿನ ಮಂಗಳಕರವಾಗಿದೆ. 4ನೇ ಮನೆಯಲ್ಲಿ ಗುರು, 6ನೇ ಮನೆಯಲ್ಲಿ ಶುಕ್ರ ಸಂಚಾರ ಸಾಕಷ್ಟು ಶುಭ ಫಲಗಳನ್ನು ನೀಡಲಿದೆ. ಇಂದು ನಿಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಉನ್ನತ ಸ್ಥಾನ, ಬಡ್ತಿಯೊಂದಿಗೆ ಪ್ರಶಂಸೆ ಗೌರವ ಸಿಗುತ್ತದೆ. ಆರ್ಥಿಕವಾಗಿ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಉತ್ತಮ.

ವೃಷಭ

ಜಾತಕದ 3ನೇ ಮನೆಯಲ್ಲಿ ಗುರು, 5ನೇ ಮನೆಯಲ್ಲಿ ಶುಕ್ರ ಸಂಚಾರ ವೃಷಭ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಶೈಕ್ಷಣಿಕ, ರಾಜಕೀಯ, ಕ್ರೀಡೆ, ಕಲೆ, ಚಿತ್ರೋದ್ಯಮ, ಸರ್ಕಾರಿ ಹುದ್ದೆಯಲ್ಲಿರುವ ಈ ರಾಶಿಯವರ ಸಂಪತ್ತು ಹೆಚ್ಚಾಗುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ದಿನವಿದು. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಿ, ಅದು ನಿಮಗೆ ಸಹಾಯ ಮಾಡುತ್ತದೆ. ಹಣಕಾಸಿನ ಸ್ಥಿತಿ ಬದಲಾಗುವುದು. ಆದರೆ ದೊಡ್ಡ ಸಾಲಗಳನ್ನು ನೀಡುವುದನ್ನು ಅಥವಾ ತೆಗೆದುಕೊಳ್ಳುವುದನ್ನು ತಪ್ಪಿಸಿ.

ಮಿಥುನ

ಅಕ್ಟೋಬರ್ 22ರಂದು ಜಾತಕದ 2ನೇ ಮನೆಯಲ್ಲಿ ಗುರು, 4ನೇ ಮನೆಯಲ್ಲಿ ಶುಕ್ರ ಸಂಚಾರ ಸಂವಹನ ಕೌಶಲ್ಯ ಹೆಚ್ಚಿಸಲಿದ್ದಾನೆ. ಇಂದು ನೀವು ವೃತ್ತಿರಂಗದಲ್ಲಿ ಯಶಸ್ಸು ಗಳಿಸುವಿರಿ. ಹೊಸ ಸಂಪರ್ಕಗಳು ನಿಮ್ಮ ವೃತ್ತಿಜೀವನದ ಬೆಳವಣಿಗೆಗೆ ಸಹಕಾರಿಯಾಗಲಿವೆ. ಆರ್ಥಿಕವಾಗಿ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಲಾಭದಾಯಕ ಒಪ್ಪಂದಗಳು ಕಂಡುಬರಬಹುದು.

ಕರ್ಕಾಟಕ

ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸಿ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ. ಹಣಕಾಸಿನ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆಯಿದೆ. ಈ ರಾಶಿಯ ಬ್ಯಾಂಕ್, ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಶುಭ ಫಲಗಳು ಸಿಗಲಿವೆ. ನಿಮ್ಮ ಜೀವನ ಅಂದುಕೊಂಡಂತೆ ನಡೆಯುವುದು.

ಸಿಂಹ

ನಿಮ್ಮ ನಾಯಕತ್ವದ ಗುಣಗಳು ಇಂದು ಎಲ್ಲರ ಗಮನ ಸೆಳೆಯಲಿವೆ. ಅಕ್ಟೋಬರ್ 22ರಂದು ಉದ್ಯೋಗದಲ್ಲಿ ಬಡ್ತಿ ಉನ್ನತ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು. ಮೇಲಧಿಕಾರಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹ ಹೆಚ್ಚಾಗಲಿದೆ. ಆರ್ಥಿಕವಾಗಿ ಇದು ಉತ್ತಮ ದಿನ. ಹೊಸ ಆದಾಯದ ಮೂಲಗಳು ಕಂಡುಬರುವ ಸಾಧ್ಯತೆ ಇದೆ. ಆದರೆ ಖರ್ಚಿನ ಮೇಲೆ ಹಿಡಿತವಿರಲಿ. ನಿಮ್ಮ ಶತ್ರುಗಳ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ. ಯಾವುದೇ ನಿರ್ಧಾರವನ್ನು ಒಂಟಿಯಾಗಿ ತೆಗೆದುಕೊಳ್ಳಬೇಡಿ.

ಕನ್ಯಾ

ಅಕ್ಟೋಬರ್ 22ರಂದು ಕೆಲಸದಲ್ಲಿ ನಿಮ್ಮ ಗಮನ ಮತ್ತು ಪರಿಶ್ರಮಕ್ಕೆ ಮನ್ನಣೆ ಸಿಗುತ್ತದೆ. ಹೊಸ ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧರಾಗಿರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಬಜೆಟ್ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಉಳಿತಾಯವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಕನ್ಯ ರಾಶಿಯಲ್ಲಿರುವ ಶುಕ್ರ ದೇವನ ಅನುಗ್ರಹದಿಂದಾಗಿ ಬಯಸಿದ್ದಲ್ಲವೂ ಸಿಗಲಿದೆ.

ತುಲಾ

ಈ ರಾಶಿಯವರಿಗೆ ಅನುಕೂಲಕರ ಸಮಯ. ತಂಡದೊಂದಿಗೆ ಕೆಲಸ ಮಾಡುವುದು ಇಂದು ನಿಮಗೆ ಯಶಸ್ಸನ್ನು ತಂದುಕೊಡಲಿದೆ. ಸೃಜನಶೀಲ ಯೋಜನೆಗಳಲ್ಲಿ ಹೊಸ ಹುದ್ದೆಯನ್ನು ಆರಂಭಿಸಬಹುದು. ಕೆಲಸದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಆರ್ಥಿಕವಾಗಿ ಸಮತೋಲಿತ ದಿನ. ವ್ಯವಹಾರಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಕ್ರೀಡೆ, ಶೈಕ್ಷಣಿಕ, ವ್ಯಾಪಾರ, ವ್ಯವಹಾರ ಹಾಗೂ ಉದ್ಯಮ ಮಾಡುವವರಿಗೆ ಈ ದಿನ ಲಾಭ ತಂದುಕೊಡಲಿದೆ.

ವೃಶ್ಚಿಕ

ಈ ರಾಶಿಯವರಿಗೆ ಮಿಶ್ರ ಫಲ. ನಿಮ್ಮ ಗುರಿಗಳನ್ನು ತಲುಪಲು ಇಂದು ನೀವು ಹೆಚ್ಚು ಶ್ರಮಿಸಬೇಕಾಗಬಹುದು. ವೃತ್ತಿಪರ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಹಠಾತ್ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ನಿಮ್ಮೆಲ್ಲಾ ಕನಸು ನನಸಾಗುವ ಸಮಯ ಇದು. ಒಂದೇ ಹುದ್ದೆಗೆ ಅಂಟಿಕೊಳ್ಳದೇ ಲಾಭದಾಯಕ ಕೆಲಸಗಳನ್ನು ಆರಂಭಿಸಬಹುದು.

ಧನುಸ್ಸು

ಹೊಸ ವಿಷಯಗಳನ್ನು ಕಲಿಯಲು ಮತ್ತು ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಇದು ಉತ್ತಮ ದಿನ. ಕೆಲಸದ ನಿಮಿತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರ್ಥಿಕವಾಗಿ ನಿಮ್ಮ ಆದಾಯ ಸ್ಥಿರವಾಗಿರುತ್ತದೆ. ಆದರೆ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಿ. ರಾಜಕೀಯ, ಸಮಾಜ ಸೇವೆ, ರೈತರಿಗೆ ಇದು ಅಂದುಕೊಂಡ ದಿನವಾಗಿದೆ.

ಮಕರ

ಈ ರಾಶಿಯವರಿಗೆ ಅಕ್ಟೋಬರ್ 22 ಅಂದುಕೊಂಡಂತೆ ಇರಲಿದೆ. ನಿಮ್ಮ ಶಿಸ್ತು ಮತ್ತು ಬದ್ಧತೆಯು ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ದಿನ. ದೀರ್ಘಾವಧಿಯ ಆರ್ಥಿಕ ಯೋಜನೆಗಳು ಫಲ ನೀಡಲಿವೆ. ಸ್ಥಿರಾಸ್ತಿ ವ್ಯವಹಾರಗಳಿಂದ ಲಾಭವಾಗಬಹುದು. ಆಸ್ತಿ ಸಂಬಂಧಿತ ವಿವಾದ, ಹಣಕಾಸಿನ ವಿಚಾರದಲ್ಲಿ ಇದ್ದ ಮನಸ್ತಾಪಗಳು ದೂರವಾಗಿ ಮನೆಯಲ್ಲಿ ಸಂತೋಷ ನೆಲೆಸಲಿದೆ.

ಕುಂಭ

ಅಕ್ಟೋಬರ್ 22 ತುಂಬಾ ಶುಭ ದಿನವಾಗಿದೆ. ಯಾವುದೇ ಕೆಲಸ ಅಂದುಕೊಂಡ ಸಮಯಕ್ಕೆ ಪೂರ್ಣಗೊಳ್ಳುವುದು. ನಿಮ್ಮ ನವೀನ ಆಲೋಚನೆಗಳು ಕೆಲಸದ ಸ್ಥಳದಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತವೆ. ತಂತ್ರಜ್ಞಾನ ಸಂಬಂಧಿತ ವೃತ್ತಿಗಳಲ್ಲಿರುವವರಿಗೆ ಶುಭ ದಿನ. ಹಣಕಾಸಿನ ಒಳಹರಿವು ಹೆಚ್ಚಾಗಲಿದೆ. ಆನ್‌ಲೈನ್ ವಹಿವಾಟುಗಳಲ್ಲಿ ಎಚ್ಚರಿಕೆ ಅಗತ್ಯ. ಮೋಸ ಹೋಗುವ ಸಾಧ್ಯತೆ ಇದೆ. ಹಿಂದೆ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ.

ಮೀನ

ಅಕ್ಟೋಬರ್ 22ರಂದು ಮೀನ ರಾಶಿಯವರಿಗೆ ಅದ್ಭುತ ಸಮಯ. ಗುರು ಹಾಗೂ ಶುಕ್ರ ಅನುಕೂಲಕರವಾದ ಸಮಯದಲ್ಲಿ ಇರುವುದರಿಂದ ಬಯಸಿದ್ದೆಲ್ಲವೂ ಸಿಗಲಿದೆ. ನಿಮ್ಮ ಸೃಜನಶೀಲತೆಯು ವೃತ್ತಿರಂಗದಲ್ಲಿ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆರ್ಥಿಕವಾಗಿ ಅನಿರೀಕ್ಷಿತ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ. ಭವಿಷ್ಯಕ್ಕಾಗಿ ಉಳಿತಾಯ ಸಾಧ್ಯವಾಗಲಿದೆ.

ASTRO ನಾಳೆಯಿಂದ ಕಾರ್ತಿಕ ಮಾಸ: ಈ ಐದು ಸ್ಥಳಗಳಲ್ಲಿ ನಿತ್ಯವೂ ದೀಪ ಹಚ್ಚಿ, ಶುಭಫಲ ನಿಮ್ಮದಾಗುತ್ತದೆ

ಕುಬೇರನ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಟ್ರೆ ಒಳ್ಳೆಯದು

ದೀಪಾವಳಿ ಹಬ್ಬ ಹೀಗೆ ಆಚರಿಸಿ, ಖುಷಿಯಾಗಿರಿ

TAGGED:Chaturgrahi YogaToday's Preeti Yogawhat is the financial situation of the 12 zodiac signs?
Share This Article
Facebook Twitter Copy Link Print
Previous Article ತಂದೆ ಮೇಲಿನ ಸೇಡಿಗೆ 5 ವರ್ಷದ ಮಗನನ್ನು ಬರ್ಬರವಾಗಿ ಹತ್ಯೆಗೈದ ಚಾಲಕ.
Next Article ಆರ್.ಎಸ್.ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಅಡುಗೆ ಸಿಬ್ಬಂದಿ ಸಸ್ಪೆಂಡ್

Popular Posts

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

You Might Also Like

ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?