Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆಶ್ವಯುಜ ಮಾಸದ ಅಮಾವಾಸ್ಯೆಯ ಮರುದಿನ ಕಾರ್ತಿಕ ಮಾಸ. 2025ರ ಅಕ್ಟೋಬರ್ 22ರ ಬುಧವಾರದಿಂದ ಕಾರ್ತಿಕ ಮಾಸ ಆರಂಭವಾಗುವುದು.
ಕಾರ್ತಿಕ ಮಾಸದಲ್ಲಿ ವಿಷ್ಣು ದೇವನು ಯೋಗನಿದ್ರೆಯಿಂದ ಎಚ್ಚರಗೊಂಡು ಮತ್ತೆ ಸೃಷ್ಟಿಯ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಈ ಮಾಸದಲ್ಲಿ ವಿಷ್ಣು ದೇವನೊಂದಿಗೆ ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಆರೋಗ್ಯ ಮತ್ತು ಸಮೃದ್ಧಿಯ ವರ ದೊರೆಯುವುದು.
ಕಾರ್ತಿಕ ಮಾಸದಲ್ಲಿ ದೀಪವನ್ನು ಬೆಳಗುವುದು ಪ್ರಯೋಜನಕಾರಿ.
ಕಾರ್ತಿಕ ಮಾಸ ಪೂರ್ಣಗೊಳ್ಳುವವರೆಗೆ ನಾವು ಈ 5 ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ಶಾಶ್ವತ ಪುಣ್ಯ ದೊರೆಯುತ್ತದೆ. ತಿಳಿಯದೆ ಮಾಡಿರುವಂತಹ ಪಾಪಗಳಿಂದ ಪರಿಹಾರವೂ ದೊರೆಯುತ್ತದೆ.
ಈ 5 ಸ್ಥಳಗಳಲ್ಲಿ ನಾವು ದೀಪವನ್ನು ಹಚ್ಚಿಡುವುದರಿಂದ ಉತ್ತಮ ಆರೋಗ್ಯವನ್ನು, ಸಮೃದ್ಧಿಯನ್ನು ಮತ್ತು ಕೌಟುಂಬಿಕ ಸಂತೋಷವನ್ನು ಪಡೆದುಕೊಳ್ಳಬಹುದು.
ಕಾರ್ತಿಕ ಮಾಸದಲ್ಲಿ ಈ 5 ಸ್ಥಳದಲ್ಲಿ ದೀಪ ಹಚ್ಚಿ.
ಹಿಂದೂ ಧರ್ಮದಲ್ಲಿನ ಶಾಸ್ತ್ರಗಳ ಪ್ರಕಾರ, ಕಾರ್ತಿಕ ಮಾಸದ ಪ್ರತಿಯೊಂದು ರಾತ್ರಿಯೂ ಮನೆಯ ದೇವರ ಕೋಣೆಯಲ್ಲಿ ಹಾಗೂ ಮನೆಯ ಬಳಿ ದೇವಸ್ಥಾನವಿದ್ದರೆ ಅಲ್ಲಿ, 4 ರಸ್ತೆಗಳು ಸೇರುವ ಸ್ಥಳದಲ್ಲಿ, ಪವಿತ್ರ ನದಿಗಳು ಅಥವಾ ಕೊಳಗಳಲ್ಲಿ, ತುಳಸಿ ಸಸ್ಯಗಳ ಬಳಿ ಮತ್ತು ಅರಳಿ ಮರಗಳ ಕೆಳಗೆ ದೀಪಗಳನ್ನು ಬೆಳಗಿಸಬೇಕು.
ಶಾಸ್ತ್ರಗಳ ಪ್ರಕಾರ, ಈ 5 ಸ್ಥಳಗಳಲ್ಲಿ ನಾವು ದೀಪಗಳನ್ನು ಹಚ್ಚಿಡುವುದರಿಂದ ಶಾಶ್ವತ ಪುಣ್ಯ ಮತ್ತು ಈ ಜೀವಿತಾವಧಿಯಲ್ಲಿ ತಿಳಿಯದೆ ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಹಾಗಾಗಿ, ಕಾರ್ತಿಕ ಮಾಸದಲ್ಲಿ ತಪ್ಪದೇ ಈ 5 ಸ್ಥಳಗಳಲ್ಲಿ ಪ್ರತಿನಿತ್ಯವೂ ದೀಪವನ್ನು ಹಚ್ಚಿಡಿ.
ಕಾರ್ತಿಕ ಮಾಸದಲ್ಲಿ ಐದು ಸ್ಥಳಗಳಲ್ಲಿ ದೀಪವನ್ನೇಕೆ ಹಚ್ಚಿಡಬೇಕು.?
ಕಾರ್ತಿಕ ಮಾಸದ ಪ್ರತಿಯೊಂದು ದಿನವೂ ದೇವರ ಕೋಣೆಯಲ್ಲಿ, ದೇವಸ್ಥಾನಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ಸಕಲ ದೇವರ ಹಾಗೂ ದೇವತೆಗಳ ಆಶೀರ್ವಾದ ದೊರೆಯುವುದು. ಲಕ್ಷ್ಮೀನಾರಾಯಣರು ನಿಮ್ಮ ಮೇಲೆ ಸಂತುಷ್ಟರಾಗುತ್ತಾರೆ.
ಕಾರ್ತಿಕ ಮಾಸದಲ್ಲಿ ತುಳಸಿ ಗಿಡದ ಕೆಳಗೆ ದೀಪ ಹಚ್ಚುವುದರಿಂದ ಅನಾರೋಗ್ಯ, ಸಂಪತ್ತು ಮತ್ತು ಕುಟುಂಬ ಸಂತೋಷದಿಂದ ಪರಿಹಾರ ದೊರೆಯುತ್ತದೆ.
ಪವಿತ್ರ ನದಿ ಅಥವಾ ಕೊಳದ ಬಳಿ ದೀಪ ಹಚ್ಚುವುದರಿಂದ ಪಿತೃಗಳ ಅಥವಾ ಪೂರ್ವಜರ ಆತ್ಮಕ್ಕೆ ಶಾಂತಿ ದೊರೆಯುವುದು ಹಾಗೂ ಅವರ ಆತ್ಮ ಸಂತುಷ್ಟವಾಗುವುದು. ಇದು ಜೀವನದಲ್ಲಿನ ಅಡೆತಡೆಗಳನ್ನು ಸಹ ತೆಗೆದುಹಾಕುತ್ತದೆ.
4 ರಸ್ತೆಗಳು ಕೂಡುವಂತಹ ಸ್ಥಳದಲ್ಲಿ ದೀಪವನ್ನು ಹಚ್ಚುವುದರಿಂದ ಕೆಲಸದಲ್ಲಿನ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ.
ಅರಳಿ ಮರದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ವಾಸಿಸುತ್ತಾರೆ ಎನ್ನುವ ಧಾರ್ಮಿಕ ನಂಬಿಕೆಯಿದೆ. ಆದ್ದರಿಂದ, ಕಾರ್ತಿಕ ಮಾಸದಲ್ಲಿ ನಾವು ಅರಳಿ ಮರದ ಕೆಳಗೆ ದೀಪ ಹಚ್ಚುವುದರಿಂದ ಏಕಕಾಲದಲ್ಲೇ ಈ 3 ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಹೀಗಾಗಿ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ನಾವು ಈ 5 ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಬೇಕು.
ಈ ವರ್ಷ ಅಂದರೆ, 2025ರ ಕಾರ್ತಿಕ ಮಾಸದಲ್ಲಿ ನೀವು ಕೂಡ ಈ 5 ಪವಿತ್ರವಾದ ಸ್ಥಳಗಳಲ್ಲಿ ಪ್ರತಿನಿತ್ಯವೂ ದೀಪವನ್ನು ಹಚ್ಚಿಡುವ ಮೂಲಕ ನಿಮ್ಮ ಜೀವನದಲ್ಲಿ ಎದುರಾಗಿವಂತಹ ಸಮಸ್ಯೆಗಳಿಂದ, ಕಷ್ಟಗಳಿಂದ ಪರಿಹಾರವನ್ನು ಪಡೆದುಕೊಳ್ಳಿ. ಈ ರೀತಿ ದೀಪವನ್ನು ಬೆಳಗುವುದು ನಿಮ್ಮ ಜೀವನವನ್ನು ಪಾವನವನ್ನಾಗಿಸಲಿ.