newsics.com
ಇಂದು ಗಣೇಶ ಚತುರ್ಥಿ. Ganesha Festival… ಮನೆಯಲ್ಲಿ ಇಂದು (ಆಗಸ್ಟ್ 27) ಯಾವ ಬಣ್ಣದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವುದು ಶುಭ?
ಗಣೇಶ ಚತುರ್ಥಿ ಹಬ್ಬಕ್ಕಾಗಿ ಜನರು ಮನೆಯಲ್ಲಿ ಗಣೇಶನ ವಿವಿಧ ಬಣ್ಣದ, ವಿವಿಧ ಗಾತ್ರದ, ವಿವಿಧ ರೂಪಗಳ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ 10 ದಿನಗಳ ಕಾಲ ಪೂಜಿಸಿ ನಂತರ ಗೌರವದಿಂದ ಬೀಳ್ಕೊಡುತ್ತಾರೆ.
ಈ ಸಮಯದಲ್ಲಿ ಯಶಸ್ಸು, ಸಮೃದ್ಧಿಗಾಗಿ ಮತ್ತು ಆತನ ಆಶೀರ್ವಾದಕ್ಕಾಗಿ ಪೂಜೆಯನ್ನು ನೆರವೇರಿಸಲಾಗುತ್ತದೆ.
ಕೆಂಪು ಗಣೇಶ ಅತಿ ಶ್ರೇಷ್ಠ…
ಗಣೇಶ ಚತುರ್ಥಿ ಹಬ್ಬದ ದಿನದಂದು ನಾವು ಮನೆಗೆ ಕೆಂಪು ಬಣ್ಣದ ಅಥವಾ ಕುಂಕುಮ ಬಣ್ಣದ ಗಣೇಶನನ್ನು ಪ್ರತಿಷ್ಠಾಪನೆ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ.
ಕೆಂಪು ಬಣ್ಣದ ಗಣೇಶನ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವುದು ಗಣೇಶನ ಶಕ್ತಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ. ತಮ್ಮ ನಾಯಕತ್ವದ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಬಯಸುವವರು, ಸಮಾಜದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಳ್ಳಲು ಬಯಸುವವರು ಅಥವಾ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಲು ಬಯಸುವವರು ಗಣೇಶ ಚತುರ್ಥಿ ದಿನದಂದು ಮನೆಯಲ್ಲಿ ಕೆಂಪು ಅಥವಾ ಕುಂಕುಮ ಬಣ್ಣದ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು.

ಬಿಳಿ ಬಣ್ಣದಿಂದ ವಿಘ್ನ ದೂರ
ಬಿಳಿ ಬಣ್ಣದ ಗಣಪತಿ ವಿಗ್ರಹವನ್ನು ಖರೀದಿಸಬೇಕು. ಬಿಳಿ ಬಣ್ಣದ ಗಣಪತಿ ವಿಗ್ರಹವು ಶಾಂತಿ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಬಿಳಿ ಬಣ್ಣದ ಗಣೇಶನ ವಿಗ್ರಹವು ನಮ್ಮ ಜೀವನದ ವಿಘ್ನಗಳನ್ನು ದೂರ ಮಾಡುವ ಅಥವಾ ಅಡೆತಡೆಗಳನ್ನು ನಿವಾರಣೆ ಮಾಡುವ ಕೆಲಸವನ್ನು ಮಾಡುತ್ತದೆ. ನೀವು ನಿಮ್ಮ ಜೀವನದಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದರೆ ಅಥವಾ ಸಾಕಷ್ಟು ಶ್ರಮವಹಿಸಿ ದುಡಿದರೂ ನಿಮಗೆ ಅದರಿಂದ ಯಾವುದೇ ಫಲ ದೊರೆಯದೇ ಇದ್ದರೆ ಅಂತಹ ಸಂದರ್ಭದಲ್ಲಿ ನೀವು ಬಿಳಿ ಬಣ್ಣದ ಗಣೇಶನ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು.
ಕಿತ್ತಳೆ ಗಣೇಶ…
ಕಿತ್ತಳೆ ಅಥವಾ ಹಳದಿ ಬಣ್ಣದ ಗಣೇಶನ ವಿಗ್ರಹವಾಗಿದೆ. ಕಿತ್ತಳೆ ಅಥವಾ ಹಳದಿ ಬಣ್ಣದ ಗಣಪತಿ ವಿಗ್ರಹವು ಜ್ಞಾನ, ಆಂತರಿಕ ದೃಷ್ಟಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಈ ಬಣ್ಣದ ಗಣೇಶನ ವಿಗ್ರಹವು ನಮಗೆ ಆಧ್ಯಾತ್ಮಿಕ ಪ್ರಯಾಣದಲ್ಲಿ ಪ್ರಗತಿಯನ್ನು ಸಾಧಿಸಲು, ಜ್ಞಾನೋದಯವನ್ನು ಪಡೆದುಕೊಳ್ಳಲು ಮತ್ತು ಜ್ಞಾನವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
ಗುಲಾಬಿ ಗಣಪ…
ಗುಲಾಬಿ ಬಣ್ಣದ ಗಣಪತಿ ವಿಗ್ರಹವನ್ನು ಕೂಡ ನೀವು ಗಣೇಶ ಚತುರ್ಥಿ ಹಬ್ಬದ ದಿನದಂದು ಮನೆಯಲ್ಲಿ ಪೂಜಿಸಬಹುದು. ಗುಲಾಬಿ ಬಣ್ಣದ ಗಣೇಶನ ವಿಗ್ರಹವು ಮನೆಯ ಕುಟುಂಬದ ಸದಸ್ಯರ ನಡುವೆ ಕರುಣೆಯನ್ನು, ವಾತ್ಸಲ್ಯವನ್ನು ಮತ್ತು ಪ್ರೀತಿಯನ್ನು ಹೆಚ್ಚಾಗಿಸುತ್ತದೆ. ತಮ್ಮ ಜೀವನದಲ್ಲಿ ನಿಜವಾದ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ತಮಗೆ ಇಷ್ಟವಾದ ಬಾಳ ಸಂಗಾತಿಯನ್ನು ಪಡೆದುಕೊಳ್ಳಲು ಬಯಸಿದರೆ ಗಣೇಶ ಚತುರ್ಥಿ ಹಬ್ಬದ ದಿನದಂದು ಮನೆಗೆ ಗುಲಾಬಿ ಬಣ್ಣದ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಬರಬೇಕು. ಈ ಬಣ್ಣದ ಗಣೇಶ ವಿಗ್ರಹವನ್ನೇ ಪೂಜಿಸಬಹುದು.

ಹಸಿರು ಗಣೇಶ…
ಹಸಿರು ಬಣ್ಣದ ಗಣೇಶನ ವಿಗ್ರಹವನ್ನು ತರುವುದು ಅತ್ಯಂತ ಶುಭ. ಈ ದಿನ ಮನೆಗೆ ಹಸಿರು ಬಣ್ಣದ ಗಣೇಶನ ವಿಗ್ರಹವನ್ನು ತರುವುದು ಸಾಮರಸ್ಯವನ್ನು, ಸಮೃದ್ಧಿಯನ್ನು ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲ, ಯಾವುದೇ ವ್ಯಕ್ತಿ ತನ್ನ ವೃತ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಹೊಂದಲು ಬಯಸಿದರೆ ಅವರು ತಮ್ಮ ಮನೆಗೆ ಗಣೇಶ ಚತುರ್ಥಿಯ ದಿನದಂದು ಹಸಿರು ಬಣ್ಣದ ಗಣೇಶನ ವಿಗ್ರಹವನ್ನು ತೆಗೆದುಕೊಂಡು ಬರಬೇಕು.
ಗಣೇಶ ಚತುರ್ಥಿ ಶುಭಾಶಯಗಳು… ಎಂತಹ ಮೂರ್ತಿ ಪೂಜಿಸಬೇಕು? ಪೂಜೆಗೆ ಯಾವುದು ಶುಭಸಮಯ?