newsics.com
ಬಾಗಲಕೋಟೆಯ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಮಾನವೀಯತೆ ಮೆರೆದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೂ, ಬಡತನದಿಂದ ಕಾಲೇಜು ಸೇರಲು ಸಾಧ್ಯವಾಗದಿದ್ದ ಜ್ಯೋತಿಗೆ ಪಂತ್ ನೆರವಿನ ಹಸ್ತ ಚಾಚಿದ್ದಾರೆ.
ಜಮಖಂಡಿಯ ಬಿಎಲ್ಡಿ ಕಾಲೇಜಿನಲ್ಲಿ ಬಿಸಿಎ ಪ್ರಥಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿರುವ ಜ್ಯೋತಿಗೆ ತರಗತಿ ಪ್ರವೇಶಕ್ಕೆ ಅಗತ್ಯವಾದ 40 ಸಾವಿರ ರೂಪಾಯಿ ಹಣವನ್ನು ಪಂತ್ ಒದಗಿಸಿದ್ದಾರೆ.
ಜ್ಯೋತಿ ಕಣಬೂರ್ ದ್ವಿತೀಯ ಪಿಯುಸಿ ಕಾಮರ್ಸ್ನಲ್ಲಿ ಶೇಕಡಾ 85 ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದರು. ಆದರೆ, ಕಡುಬಡತನದಿಂದಾಗಿ ಬಿಸಿಎ ವ್ಯಾಸಂಗದ ಕನಸು ಕೈಗೆಟುಕದಂತಾಗಿತ್ತು. ಆಕೆಯ ತಂದೆ ತೀರ್ಥಯ್ಯ ಕಣಬೂರ್ ಹಣ ಒದಗಿಸಲಾಗದೆ ಪರದಾಡುತ್ತಿದ್ದರು.
ಈ ವಿಷಯ ಅದೇ ಊರಿನ ಅನಿಲ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿದೆ. ಈ ಸಂದರ್ಭದಲ್ಲಿ ಅನಿಲ ಹುಣಸೀಕಟ್ಟಿ ಅವರ ಸ್ನೇಹಿತರು ಐಪಿಎಲ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಅನಿಲ ಅವರು ವಿಷಯ ತಿಳಿಸಿದ್ದಾರೆ. ಅನಿಲ್ ಅವರ ಸ್ನೇಹಿತರು ಹಣದ ಅವ್ಯಶಕತೆ ಇರುವ ವಿಚಾರವನ್ನು ರಿಷಭ್ ಪಂತ್ ಅವರ ಗಮನಕ್ಕೆ ತಂದಿದ್ದಾರೆ. ಆಗ, ರಿಷಭ್ ಪಂತ್ ಅವರು ಜ್ಯೋತಿಯ ಬಿಸಿಎ ವ್ಯಾಸಂಗಕ್ಕೆ 40 ಸಾವಿರ ರೂ. ನೀಡಿದ್ದಾರೆ.
https://www.newsics.com/2025/08/06/the-monsoon-season-continues-in-the-state-2/