newsics.com
ಜಲಂಧರ್ : ಮದುವೆಗೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬೆಂಕಿ ಹಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ಪಂಜಾಬ್ನ ಜಲಂಧರ್ನ ರಾಮ ಮಂಡಿ ಹಂತ-2 ರ ಏಕ್ತಾ ನಗರದಲ್ಲಿ ನಡೆದಿದೆ.
ಮಹಿಳೆ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ಮೂವರಿಗೂ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಸುಖ್ವಿಂದರ್ ಕೌರ್ ಎಂಬ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವ್ಯಕ್ತಿ ನಿತ್ಯ ತರಕಾರಿಗಳನ್ನು ಮನೆಗೆ ತಲುಪಿಸುವಂತಹ ಕೆಲಸ ಮಾಡುತ್ತಿದ್ದ, ಮಹಿಳೆ ಬಳಿ ಮದುವೆ ಪ್ರಸ್ತಾಪ ಮಾಡಿದ್ದ, ಆಕೆ ತಿರಸ್ಕರಿಸಿದ್ದಳು. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಆ ಸಮಯದಲ್ಲಿ ಕೌರ್ ಆತನಿಗೆ ಕಪಾಳಮೋಕ್ಷ ಮಾಡಿದ್ದಳು. ಅದು ಅವನಿಗೆ ಕೋಪ ತರಿಸಿತ್ತು.ಸ್ವಲ್ಪ ಸಮಯದ ಬಳಿಕ ಪೆಟ್ರೋಲ್ ಬಾಟಲಿಯನ್ನು ತಂದು, ಗೋಡೆಯನ್ನು ಹತ್ತಿ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ.
https://www.newsics.com/2025/08/03/popular-tamil-comedian-madhan-bob-is-no-more/