newsics.com
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇನ್ನೊಂದೆಡೆ ಮಾಡಬಾರದ್ದನ್ನು ಮಾಡಿ ಜೈಲುಪಾಲಾಗಿರುವ ಪ್ರಜ್ವಲ್ ರಾತ್ರಿ ಇಡೀ ಜೈಲಿನಲ್ಲಿ ಕಣ್ಣೀರಿಟ್ಟಿದ್ದಾರಂತೆ.
ಸದ್ಯ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣಗೆ 15528 ಎಂಬ ಸಜಾಕೈದಿ ನಂಬರ್ ನೀಡಿದ್ದಾರೆ. ರಾತ್ರಿ ಪ್ರಜ್ವಲ್ ರೇವಣ್ಣಗೆ ವೈದ್ಯರು ತಪಾಸಣೆ ನಡೆಸಿದ್ದು, ಈ ವೇಳೆ ಪ್ರಜ್ವಲ್ ಕಣ್ಣೀರಿಟ್ಟಿದ್ಧಾನೆ ಎನ್ನಲಾಗಿದೆ.
ಅಲ್ಲದೇ ಜೈಲು ಸಿಬ್ಬಂದಿ ಬಳಿ ಕಣ್ಣೀರಿಟ್ಟಿರುವ ಪ್ರಜ್ವಲ್ ಕಾನೂನು ಹೋರಾಟ ನಡೆಸುವ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಜ್ವಲ್ ಗೆ ಜೈಲಿನ ವಿಶೇಷ ಭದ್ರತಾ ಕೊಠಡಿ ನೀಡಲಾಗಿದೆ. ಜೊತೆಗೆ ಜೈಲಿನ ಡ್ರೆಸ್ಕೋಡ್ ನೀಡಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಸಾಮಾನ್ಯ ಕೈದಿಯಂತೆ ಕಾಲ ಕಳೆಯಬೇಕು. ಜೈಲಿನ ಕೈದಿಗಳ ಸಮವಸ್ತ್ರವನ್ನೇ ಧರಿಸಬೇಕು. ಜೊತೆಗೆ ಎಂಟು ಗಂಟೆಗಳ ಕಾಲ ಮೈ ಬಗ್ಗಿಸಿ ದುಡಿಯಬೇಕಾಗುತ್ತದೆ. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು. ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದಾದರೂ ಒಂದು ಕೆಲಸವನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು. ಈ ಕೆಲಸಕ್ಕೆ ಸಂಬಳ ಸಹ ಪಾವತಿ ಮಾಡಲಾಗುತ್ತೆ. ಕೈದಿಗಳಿಗೆ ನೀಡುವ ಕೂಲಿಯನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡ್ತಾರೆ. ಸದ್ಯ ಪ್ರಜ್ವಲ್ ರೇವಣ್ಣಗೆ ವಿಶೇಷ ಭದ್ರತಾ ಕೊಠಡಿ ನೀಡಿದ್ದು, ಅದೇ ಕೊಠಡಿಯಲ್ಲಿ ವಾಸವಿರಬೇಕಾಗುವುದು.
ಕೆ.ಆರ್.ನಗರದಲ್ಲಿನ ತೋಟದ ಮನೆಯೊಂದರಲ್ಲಿ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದಿರುವ ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ಗೆ ಜೀವಾವಧಿ ಶಿಕ್ಷೆ ನೀಡಿದ್ದು, 11 ಲಕ್ಷ ದಂಡ ವಿಧಿಸಿದೆ.
Bomb Threat ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ