Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಐತಿಹಾಸಿಕ ತೀರ್ಪು ನೀಡಿದ ಕೋರ್ಟ್
ದೇಶಪ್ರಮುಖ

ವಿವಾಹಿತನ ಹಿಂದೆ ಬಿದ್ದಿದ್ದ ಮಹಿಳೆ: ಐತಿಹಾಸಿಕ ತೀರ್ಪು ನೀಡಿದ ಕೋರ್ಟ್

Share
2 Min Read
SHARE

newsics.com

ದೆಹಲಿಯ ಸ್ಥಳೀಯ ನ್ಯಾಯಾಲಯವೊಂದು ಅತ್ಯಂತ ಅಸಾಮಾನ್ಯ ಆದರೆ ಮಹತ್ವದ ಪ್ರಕರಣವೊಂದರಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣ ಕೇವಲ ವೈಯಕ್ತಿಕ ಕಿರುಕುಳಕ್ಕೆ ಸಂಬಂಧಿಸಿಲ್ಲ. ಗೌಪ್ಯತೆ, ಮಾನಸಿಕ ಕಿರುಕುಳ ಮತ್ತು ವೈಯಕ್ತಿಕ ಸ್ವಾತಂತ್ರ್ಯದಂತಹ ಗಂಭೀರ ಸಮಸ್ಯೆಗಳನ್ನು ಒಳಗೊಂಡಿದೆ.

ಸಾಮಾನ್ಯವಾಗಿ ಒಬ್ಬ ಹುಡುಗ ಅಥವಾ ಪುರುಷ ನನ್ನನ್ನು ಹಿಂಬಾಲಿಸ್ತಿದ್ದಾನೆ, ಮದುವೆಯಾಗು ಅಂತ ಕಾಟ ಕೊಡ್ತಿದ್ದಾನೆ, ವಿವಾಹಿತೆಯಾದ್ರೂ ಮಾನಸಿಕ ಹಿಂಸೆ ನೀಡ್ತಿದ್ದಾನೆ, ನನಗೆ ರಕ್ಷಣೆ ಬೇಕು ಅಂತ ಹುಡುಗಿಯರು, ಮಹಿಳೆಯರು, ಪೊಲೀಸ್- ಕೋರ್ಟ್ ಮೊರೆ ಹೋಗ್ತಾರೆ. ಆದ್ರೆ ಈ ಪ್ರಕರಣ ಸ್ವಲ್ಪ ಭಿನ್ನವಾಗಿದೆ. ಇಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಗೆದ್ದಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ನೀಡಿದೆ.

ವಿವಾಹಿತನ ಹಿಂದೆ ಬಿದ್ದಿದ್ದ ವಿವಾಹಿತೆ: ವಿವಾಹಿತರೊಬ್ಬರು ಮಹಿಳೆ ವಿರುದ್ಧ ದೂರು ನೀಡಿದ್ದರು. ಮಹಿಳೆ ಲೈಂಗಿಕ ಸಂಬಂಧ ಬೆಳೆಸುವಂತೆ ಪದೇ ಪದೇ ಮಾನಸಿಕ ಮತ್ತು ಭಾವನಾತ್ಮಕ ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಅವರ ವರ್ತನೆಯಿಂದ ಮನೆಯ ಶಾಂತಿ ಹಾಳಾಗ್ತಿದೆ, ಸಾರ್ವಜನಿಕ ಪ್ರದೇಶದಲ್ಲಿ ತೊಂದರೆ ಆಗ್ತಿದೆ, Social Media ಮೂಲಕ ಕುಟುಂಬಕ್ಕೆ ಕಿರುಕುಳ ನೀಡಲಾಗ್ತಿದೆ ಎಂದೂ ಆರೋಪಿಸಿದ್ದರು.

ಕಿರುಕುಳ ಶುರುವಾಗಿದ್ದು ಎಲ್ಲಿಂದ? :
ದೂರುದಾರನ ದೂರಿನ ಪ್ರಕಾರ, 2019ರಲ್ಲಿ ಮೊದಲ ಬಾರಿ ಮಹಿಳೆ ಮತ್ತು ಪುರುಷನ ಭೇಟಿಯಾಗಿತ್ತು. ಆಧ್ಯಾತ್ಮಿಕ ಆಶ್ರಮದಲ್ಲಿ ಮಹಿಳೆ, ದೂರುದಾರನನ್ನು ಭೇಟಿಯಾಗಿದ್ದಲ್ಲದೆ, ಅವರನ್ನು ಪ್ರೀತಿಸಲು ಶುರು ಮಾಡಿದ್ದರು. ಮಹಿಳೆಯ ಪ್ರೇಮ ನಿವೇದನೆಯನ್ನು ದೂರುದಾರ ತಿರಸ್ಕರಿಸಿದ್ದ. ಆದ್ರೆ ಮಹಿಳೆ ಇದನ್ನು ಅಲ್ಲಿಗೆ ಬಿಡಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಸಿದ್ದರು. ಇದ್ರಿಂದ ದೂರುದಾರನಿಗೆ ಮಾನಸಿಕ ಹಿಂಸೆ ಶುರುವಾಗಿತ್ತು.

ಕೋರ್ಟ್ ಗೆ ಸೂಕ್ತ ಸಾಕ್ಷ್ಯ ನೀಡಿದ್ದ ದೂರುದಾರ :
ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ದೂರುದಾರ, ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿದ್ದ. ಮಹಿಳೆ ನಡೆಸಿದ್ದ ಚಾಟ್, ಸಿಸಿಟಿವಿ ದೃಶ್ಯ. ಸೋಶಿಯಲ್ ಮೀಡಿಯಾ ಸಂದೇಶಗಳ ಸ್ಕ್ರೀನ್ ಶಾಟ್ ಸೇರಿದಂತೆ ಕೆಲ ಸಾಕ್ಷ್ಯ ಇದ್ರಲ್ಲಿತ್ತು. ಸಾಕ್ಷ್ಯವನ್ನು ಪರಿಶೀಲನೆ ನಡೆಸಿದ ಕೋರ್ಟ್, ಮಹಿಳೆ, ದೂರುದಾರನ ಗೌಪ್ಯತೆಗೆ ಧಕ್ಕೆ ಮಾಡಿದ್ದಲ್ಲದೆ ಮಾನಸಿಕ ಶಾಂತಿ ಕದಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಕೋರ್ಟ್ ತೀರ್ಪು ಏನು?:
ಪರ – ವಿರೋಧ ವಾದಗಳನ್ನು ಆಲಿಸಿದ ರೋಹಿಣಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರೇಣು, ದೂರುದಾರನ ಇಚ್ಛೆಗೆ ವಿರುದ್ಧವಾಗಿ ಯಾವುದೇ ರೀತಿಯ ವೈಯಕ್ತಿಕ ಸಂಪರ್ಕಕ್ಕೆ ಒತ್ತಾಯಿಸಬಾರದು. ಪ್ರತಿಯೊಬ್ಬ ನಾಗರಿಕನೂ ಮುಕ್ತ, ಭಯ-ಮುಕ್ತ ಮತ್ತು ಗೌರವಾನ್ವಿತ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾನೆ ಎಂದಿದ್ದಾರೆ. ಕೋರ್ಟ್, ಇಬ್ಬರ ಮಧ್ಯೆ 300 ಮೀಟರ್ ಅಂತರ ಇರಬೇಕು. ಯಾವುದೇ ರೀತಿಯ ಡಿಜಿಟಲ್, ಸಾಮಾಜಿಕ ಅಥವಾ ವೈಯಕ್ತಿಕ ಸಂಪರ್ಕ ಇರಬಾರದು ಎಂದು ಕೋರ್ಟ್ ಆದೇಶ ನೀಡಿದೆ.
ಮಹತ್ವ ಪಡೆದ ಕೋರ್ಟ್ ಈ ತೀರ್ಪು : ಈ ಪ್ರಕರಣ ಪುರುಷನ ಭದ್ರತೆ, ಗೌಪ್ಯತೆ ಮತ್ತು ಕಿರುಕುಳದ ವಿರುದ್ಧ ಎತ್ತಲಾದ ಕಾನೂನು ಧ್ವನಿಗೂ ಮಹತ್ವ ಇದೆ ಎಂಬುದನ್ನು ಸಾರುತ್ತದೆ. ಮೊದಲೇ ಹೇಳಿದಂತೆ ಸಾಮಾನ್ಯವಾಗಿ ಇಂತಹ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರು ಕೂಡ ಬಲಿಪಶು ಆಗ್ತಿದ್ದಾರೆ. ಅನೇಕ ಮಹಿಳೆಯರು ತಮ್ಮ ಪರ ಇರುವ ಕಾನೂನನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಇಂಥ ಸಮಯದಲ್ಲಿ ಪುರುಷರ ಸಮಸ್ಯೆ ಆಲಿಸಿ, ಅದಕ್ಕೆ ಪರಿಹಾರ ನೀಡಿದ ಕೋರ್ಟ್ ಈ ತೀರ್ಪು ಸಾಕಷ್ಟು ಮಹತ್ವ ಪಡೆಯುತ್ತದೆ.

ಧರ್ಮಸ್ಥಳ ಪ್ರಕರಣ : 2ನೇ ದಿನವೂ ಸಿಗದ ಯಾವುದೇ ಅಸ್ತಿಪಂಜರ, ಮುಂದುವರೆದ ಶೋಧ

TAGGED:Woman who fell for a married man: Court issues historic verdict
Share This Article
Facebook Twitter Copy Link Print
Previous Article ಧರ್ಮಸ್ಥಳ ಪ್ರಕರಣ : 2ನೇ ದಿನವೂ ಸಿಗದ ಯಾವುದೇ ಅಸ್ತಿಪಂಜರ, ಮುಂದುವರೆದ ಶೋಧ
Next Article ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ: ಕಂಪನಿಯ ಸರ್ವರ್ ಹ್ಯಾಕ್, 378 ಕೋಟಿ ರೂ. ಮಾಯ

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?