newsics.com
ರಾಯಚೂರು: ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ವಿಚಾರಗಳಿಗೆ ಮಹತ್ವದ ಕೆಡಿಪಿ (ಜಿಲ್ಲಾ ಯೋಜನೆ ಸಮಿತಿ) ಸಭೆಯೇ ಗಮನಸೆಳೆಯುವ ಅಂಶವಾಯಿತು. ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಒಂದು ಕಡೆ ಸಚಿವರು ಹಾಗೂ ಶಾಸಕರು ಪರಸ್ಪರ ವಾಗ್ವಾದ ನಡೆಸುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ ರಮ್ಮಿ ಆಟದಲ್ಲಿ ತಲ್ಲೀನರಾಗಿದ್ದ ದೃಶ್ಯ ಮಾಧ್ಯಮದ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಇಂದು ಗಂಭೀರವಾಗಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಸಭೆಯ ಗಂಭೀರತೆಯ ಬಗ್ಗೆ ಕನಿಷ್ಟ ಮನಸ್ಸು ಇರಿಸಿಕೊಳ್ಳದೆ, ಮೊಬೈಲ್ನಲ್ಲಿ ರಮ್ಮಿ ಆಟವಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ಸಭೆಯ ವಿಷಯಗಳು ಚರ್ಚೆ ಆಗುತ್ತಿದ್ದಾಗಲೇ ಅಧಿಕಾರಿ ರಮ್ಮಿ ಆಟದಲ್ಲಿ ತೊಡಗಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ಕೂಡಲೇ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಅಧಿಕಾರಿಯ ನಿರ್ಲಕ್ಷ್ಯದ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಈ ವಿಡಿಯೋ ತಕ್ಷಣವೇ ಸಭೆಯಲ್ಲಿ ಹಾಜರಿದ್ದ ಸಚಿವರು ಮತ್ತು ಶಾಸಕರ ಕಣ್ಣಿಗೆ ಬಿದ್ದಿದೆ.
ಅಧಿಕಾರಿ ರಮ್ಮಿ ಆಟವಾಡಿದ ಘಟನೆ ಜಿಲ್ಲಾಡಳಿತದ ಶಿಸ್ತು ಮತ್ತು ಸಭೆಗಳ ಗೌರವಕ್ಕೆ ಧಕ್ಕೆಯಾಯಿತು. ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ, ಯೋಜನೆಗಳ ಅನುಷ್ಠಾನ ಹಾಗೂ ಜನಪರ ವಿಚಾರಗಳು ಚರ್ಚೆಯಾಗಬೇಕಿತ್ತು. ಆದರೆ, ಕೆಲವರು ಗಂಭೀರತೆಯನ್ನುಯ ಅಸಡ್ಡೆಯಾಗಿ ತೋರಿಸಿರುವ ಅಸಂಯಮಿತ ನಡೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಸರ್ಕಾರದ ಶಿಸ್ತಿಗೆ ಚುಕ್ಕಾಣಿ ಬೇಕೆಂಬ ಪ್ರಶ್ನೆ ಎಬ್ಬಿಸಿದೆ. ‘ಸಭೆ ಸಮಯದಲ್ಲಿ ಇಂತಹ ಆಟವಾಡುವುದು ಎಚ್ಚರಿಕೆ ಸಿಗಲೇಬೇಕಾದ ಸಂಗತಿ. ಸರ್ಕಾರದ ಪ್ರಾಮಾಣಿಕತೆಗೆ ಬದ್ಧರಾಗದ ಅಧಿಕಾರಿಗಳಿಗೆ ಯಾವುದೇ ಸಹಿಷ್ಣುತೆ ಇಲ್ಲ. ಮುಂದಿನ ಸಭೆಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗಬಾರದು’ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತೀವ್ರ ಎಚ್ಚರಿಕೆ ನೀಡಿದರು.