newsics.com
ದಾವಣಗೆರೆ: ಗಂಡ-ಹೆಂಡತಿ ನಡುವೆ ಸಾಲದ ವಿಚಾರವಾಗಿ ಗಲಾಟೆ ಆರಂಭವಾಗಿ ವಿಕೋಪಕ್ಕೆ ತಿರುಗಿದೆ. ಪತಿ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.
ತುಂಡಾದ ಮೂಗಿನ ಸಮೇತ ಮಗಂಡ-ಹೆಂಡತಿ ನಡುವೆ ಜಗಳ: ಹಿಳೆ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.
ಕೋಪದ ಬರದಲ್ಲಿ ಪತಿ ಮಹಾಶಯ ವಿಜಯ್ ಪತ್ನಿ ವಿದ್ಯಾಳ ಮೂಗನ್ನೇ ಕಚ್ಚಿ ತುಂಡರಿಸಿದ್ದಾನೆ. ಮೂಗು ಮುಖದಿಂದ ಬೇರ್ಪಟ್ಟು ಬಿದ್ದಿದ್ದು, ತುಂಡಾದ ಮೂಗಿನ ಸಮೇತ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ವಿದ್ಯಾಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.