newsics.com
ಬೆಂಗಳೂರು: ಮನೆಗೆ ಕುಡಿದು ಬಂದ ಪತಿಗೆ ಪತ್ನಿ ಕೈಯಲ್ಲಿದ್ದ ರಾಗಿ ಮುದ್ದೆ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಸುದ್ದೆಗುಂಟೆಪಾಳ್ಯದಲ್ಲಿ ನಡೆದಿದೆ.
ಭಾಸ್ಕರ್ ಮನೆಗೆ ಬರುವಾಗ ಕಂಠಪೂರ್ತಿ ಕುಡಿದ್ದಾನೆ. ಕಳೆದ ಕೆಲ ದಿನಗಳಿಂದ ಪತಿ ಭಾಸ್ಕರ್ ಕುಡಿತ ಹೆಚ್ಚಿಸಿದ್ದ. ಮನೆಗೆ ಬರುವಾಗ ಕುಡಿದೇ ಬರುತ್ತಿದ್ದ. ಕುಡಿತದ ಕುರಿತು ಪತ್ನಿ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಆದರೆ ಭಾಸ್ಕರ್ ಮಾತ್ರ ತನ್ನ ಅಭ್ಯಾಸ ಕಡಿಮೆ ಮಾಡಿರಲಿಲ್ಲ.
ಭಾಸ್ಕರ್ ಮತ್ತೆ ಕುಡಿದಿರುವುದನ್ನು ನೋಡಿ ಪತ್ನಿಗೆ ಶ್ರುತಿಗೆ ಪಿತ್ತ ನೆತ್ತಿಗೇರಿದೆ. ಮತ್ತೆ ಯಾಕೆ ಕುಡಿದಿದ್ದೀರಿ ಎಂದು ಪ್ರಶ್ನಿಸಿದ್ದಾಳೆ.ಇತ್ತ ಪತಿ ಹಾಗೂ ಪತ್ನಿ ನಡುವೆ ಸಣ್ಣದಾಗ ವಾಗ್ವಾದ ನಡೆದಿದೆ. ಮುದ್ದೆ ಮಾಡುತ್ತಿದ್ದಲ್ಲಿಂದ ಎದ್ದು ಬಂದ ಪತ್ನಿ ಶ್ರುತಿ ಕೈಯಲ್ಲಿದ್ದ ಮುದ್ದೆ ಕೋಲಿನಿಂದ ಭಾಸ್ಕರ್ ಮೇಲೆ ಹಲ್ಲೆ ಮಾಡಿದ್ದಾಳೆ. ಮೊದಲ ಏಟಿಗೆ ಭಾಸ್ಕರ್ಗೆ ತೀವ್ರವಾಗಿ ಗಾಯವಾಗಿದೆ. ಇದರ ಪರಿಣಾಮ ಭಾಸ್ಕರ್ಗೆ ಪ್ರತಿರೋಧಿಸಲು ಸಾಧ್ಯವಾಗಿಲ್ಲ. ಒಂದೆಡೆ ಕುಡಿತದ ನಶೆ, ಮತ್ತೊಂದೆಡೆ ಪತ್ನಿ ರಾಗಿ ಮುದ್ದೆ ಕೋಲಿನಿಂದ ಹೊಡೆತ ಹೊಡೆತ ಭಾಸ್ಕರ್ ತಲೆಗೆ ತೀವ್ರಗಾಯ ಮಾಡಿತ್ತು.
ಕುಸಿದು ಬಿದ್ದ ಭಾಸ್ಕರ್ ಬಳಿಕ ಏಳಲೇ ಇಲ್ಲ. ಪತಿ ಭಾಸ್ಕರ್ನ್ನು ಎಳೆದುಕೊಂಡು ಬೆಡ್ ಮೇಲೆ ಮಲಗಿಸಿದ ಪತ್ನಿ ಮರುದಿನ ಬೆಳಗ್ಗೆ ಪತಿ ನಿದ್ದೆಯಲ್ಲಿ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಪೊಲೀಸರು ಭಾಸ್ಕರ್ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.ಇದೀಗ ಪತ್ನಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.