newsics.com
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣಕ್ಕೆ ಆರ್ ಸಿಬಿಯೇ ಹೊಣೆ ಎಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶದಲ್ಲಿ ತಿಳಿಸಿದೆ.
ಆರ್ಸಿಬಿ ಪೊಲೀಸರ ಅನುಮತಿಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ವಿಜಯೋತ್ಸವ ಮೆರವಣಿಗೆಯ ಆಹ್ವಾನವನ್ನು ಪೋಸ್ಟ್ ಮಾಡಿದೆ. ಇದರಿಂದಾಗಿ ಭಾರಿ ಜನಸಮೂಹ ಸೇರಿತ್ತು ಮತ್ತು ಪೊಲೀಸರಿಗೆ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಸಾಕಷ್ಟು ಸಮಯವಿರಲಿಲ್ಲ” ಎಂದು ನ್ಯಾಯಮಂಡಳಿ ಹೇಳಿದೆ.
“ಪೊಲೀಸರು ಕೂಡ ಮನುಷ್ಯರು, ದೇವರುಗಳೂ ಅಲ್ಲ, ಮಾಂತ್ರಿಕರೂ ಅಲ್ಲ. ಅವರ ಬಳಿ ‘ಅಲ್ಲಾದೀನ ದೀಪ’ ಇಲ್ಲ. ಒಂದು ವೇಳೆ ಅದಿರುತ್ತಿದ್ದರೆ ಅವರು ಒಂದೇ ಬಾರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಬಹುದಾಗಿತ್ತು” ಎಂದು ನ್ಯಾಯಮಂಡಳಿ ಹೇಳಿದೆ. ಈ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರಿಗೆ ದೊಡ್ಡ ಪರಿಹಾರ ಸಿಕ್ಕಿದೆ. ಅವರ ಅಮಾನತು ರದ್ದುಗೊಳಿಸಿದ ನ್ಯಾಯಮಂಡಳಿ, ಅಮಾನತು ಅವಧಿಯನ್ನು ಸೇವೆಯ ಭಾಗವೆಂದು ಪರಿಗಣಿಸಬೇಕು ಎಂದು ಹೇಳಿದೆ.