newsics.com
ಕೊಲ್ಕತ್ತಾ,: ಯುವತಿಯೊಬ್ಬಳು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆ ಆಗಿದ್ದಕ್ಕೆ ಯುವತಿ ಜೀವಂತವಾಗಿರುವಾಗಲೇ ಅವರು ಸಾಂಪ್ರದಾಯಿಕ ಹಿಂದೂ ಆಚರಣೆಗಳಂತೆ ಶ್ರಾದ್ಧ ಕಾರ್ಯ ಮಾಡಿರುವ ಘಟನೆಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.
ತಮ್ಮ ಮಗಳು ಇನ್ನೂ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ, ಆಕೆಯನ್ನು ಮರುಳು ಮಾಡಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪದವಿಯನ್ನೂ ಪೂರ್ಣಗೊಳಿಸದ ತಮ್ಮ ಮಗಳು, ತಮ್ಮ ಒಪ್ಪಿಗೆಯಿಲ್ಲದೆ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅವರ ಕುಟುಂಬಕ್ಕೆ ಅವಮಾನ ಮಾಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಪೋಷಕರ ಬಗ್ಗೆ ಕಾಳಜಿ ವಹಿಸದ ತಮ್ಮ ಮಗಳು ಜೀವಂತವಾಗಿದ್ದರೂ ಸಹ ತಮ್ಮ ಪಾಲಿಗೆ ಆಕೆ ಸತ್ತಂತೆ ಎಂದು ಆಕೆಯ ಕುಟುಂಬ ಹೇಳಿದೆ.
ಯುವತಿಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್ ಅವರು ತಮ್ಮ ಮನೆಯ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಬಯಸಿದ್ದೆವು. ಅದಕ್ಕಾಗಿಯೇ ಒಳ್ಳೆಯ ಸಂಬಂಧವನ್ನು ನೋಡಿ ಮದುವೆ ಮಾಡಲು ನಿರ್ಧರಿಸಿದೆವು. ಆದರೆ ಆಕೆ ನಮ್ಮ ಮಾತನ್ನು ಕೇಳಲು ಸಹ ಬಯಸಲಿಲ್ಲ. ಅವಳು ನಮ್ಮನ್ನು ಬಿಟ್ಟು ಬೇರೆಯವರೊಂದಿಗೆ ಹೇಳದೆ ಕೇಳದೆ ಓಡಿಹೋದಳು. ಆತನನ್ನೇ ಮದುವೆಯಾದಳು. ಹೀಗಾಗಿ, ಆ ಯುವತಿಯ ಮದುವೆಯ 12 ದಿನಗಳ ನಂತರ ತಮ್ಮ ಮನೆ ಮಗಳು ಸತ್ತಿದ್ದಾಳೆಂದು ಭಾವಿಸಿ ಈ ಪಿಂಡ ಪ್ರದಾನ ಆಚರಣೆಯನ್ನು ಮಾಡಿರುವುದಾಗಿ ಅವರು ಹೇಳಿದ್ದಾರೆ.