newsics.com
ಇರಾನ್ನ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸ್ತಿದ್ದಂತೆ ಯುದ್ಧೋನ್ಮದ ಮತ್ತಷ್ಟು ಬಿಗಡಾಯಿಸಿದೆ. ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಇರಾನ್ ವಿಶ್ವಕ್ಕೆ ಶಾಕ್ ಕೊಡಲು ಮುಂದಾಗಿದೆ. ಪ್ರಮುಖ ತೈಲ ಹಡಗು ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಲು ಮುಂದಾಗಿದೆ. ಒಂದು ವೇಳೆ ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.
ಯಾವುದೇ ಎರಡು ದೊಡ್ಡ ಭೂಖಂಡಗಳನ್ನು ಪ್ರತ್ಯೇಕಿಸುವ ಕಿರಿದಾದ ಜಲಮಾರ್ಗವನ್ನು ಜಲಸಂಧಿ ಎಂದು ಕರೆಯುತ್ತಾರೆ. ಕೆಲವೊಮ್ಮೆ ಎರಡು ಮಹಾಸಮುದ್ರಗಳನ್ನು ಬೆಸೆಯಲು ಎರಡು ದೇಶಗಳ ಗಡಿ ಭಾಗವನ್ನು ಕೊರೆದು ಮಾಡುವಂಥ ನೀರಿನ ಕಾಲುವೆಗಳನ್ನು ಸಹ ಜಲಸಂಧಿಗಳೆಂದು ಕರೆಯುತ್ತಾರೆ.
ಈಗ ಚರ್ಚೆಯಾಗುತ್ತಿರುವ ಹೊರ್ಮುಝ್ ಜಲಸಂಧಿಯು ಇರಾನ್ ನ ದಕ್ಷಿಣ ಭಾಗದಲ್ಲಿದೆ. ಇದು ಇರಾನ್ ಹಾಗೂ ಅದರ ದಕ್ಷಿಣ ಭಾಗದಲ್ಲಿರುವ ಒಮನ್ ದೇಶಗಳ ನಡುವೆ ಇದೆ. ಈ ಜಲಮಾರ್ಗವು, ಇಂಗ್ಲೀಷಿನ ‘U’ ಅಕ್ಷರದ ಉಲ್ಟಾ ಆಕಾರದಲ್ಲಿದ್ದು, ಪರ್ಷಿಯನ್ ಕೊಲ್ಲಿ (ಪರ್ಷಿಯನ್ ಗಲ್ಫ್) – ಒಮನ್ ಕೊಲ್ಲಿಯನ್ನು (ಒಮನ್ ಗಲ್ಫ್) ಸಂಪರ್ಕಿಸುತ್ತದೆ. ಇದು ಪನಾಮಾ ಕಾಲುವೆ ಅಥವಾ ಸೂಯೆಜ್ ಕಾಲುವೆಗಳಂತೆ ಮನುಷ್ಯ ನಿರ್ಮಿತ ಜಲಸಂಧಿಯಲ್ಲ, ನೈಸರ್ಗಿಕವಾದದ್ದು
- ಹೊರ್ಮುಜ್ ಜಲಸಂಧಿ ಬಂದ್ ಆದ್ರೆ ಭಾರತದ ಮೇಲೆ ಎಫೆಕ್ಟ್
- ಭಾರತಕ್ಕೆ ಪ್ರತಿದಿನ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಆಮದು
- ಭಾರತದ ಕಚ್ಚಾ ತೈಲ ಬೇಡಿಕೆಯ ಶೇ.85ರಷ್ಟು ಆಮದು ಆಗಲಿದೆ
- ತೈಲ ಬಳಕೆ, ಆಮದು ರಾಷ್ಟ್ರಗಳಲ್ಲಿ ವಿಶ್ವದಲ್ಲೇ ಭಾರತಕ್ಕೆ 3ನೇ ಸ್ಥಾನ
- ಒಂದು ವೇಳೆ ಈ ಮಾರ್ಗ ಮುಚ್ಚಿದ್ರೆ ತೈಲ ಸಾಗಾಟ ವೆಚ್ಚ ಹೆಚ್ಚಳ
- ತೈಲ ಬೆಲೆ ಏರಿಕೆ, ಹಣದುಬ್ಬರ ಹೆಚ್ಚಳಕ್ಕೂ ಕಾರಣ ಆಗಬಹುದು
- ಅಂದಾಜು 51 ಲಕ್ಷ ಬ್ಯಾರಲ್ ಕಚ್ಚಾ ತೈಲು ವಿದೇಶಗಳಿಂದ ಆಮದು
- ಜಲಸಂಧಿ ಬಂದ್ ಆದ್ರೆ ತೈಲ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ
- ಸದ್ಯ 90 ಡಾಲರ್ ಆಸುಪಾಸಿರುವ ಬ್ಯಾರೆಲ್ ಕಚ್ಚಾ ತೈಲದ ಬೆಲೆ