newsics.com
ನವದೆಹಲಿ: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆ ಇರಾನ್ನಲ್ಲಿರುವ ಭಾರತೀಯರನ್ನು ಕರೆತರಲು ಭಾರತ ಆಪರೇಷನ್ ಸಿಂಧೂ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಇಂದು ಮತ್ತೊಂದು ವಿಮಾನ ಇರಾನ್ನಿಂದ ದೆಹಲಿಗೆ ಆಗಮಿಸಿದ್ದು, ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಭಾರತೀಯರು ತವರಿಗೆ ಮರಳಿದ್ದಾರೆ.ಎಂಇಎ ಅಧಿಕೃತ ವಕ್ತಾರ ರಾಂಧೀರ್ ಜೈಸ್ವಾಲ್ ಅವರು ಎಕ್ಸ್ ನಲ್ಲಿ ಈ ಬಗ್ಗೆ ಬರೆದಿದ್ದು, ಆಪರೇಷನ್ ಸಿಂಧೂ ಮುಂದುವರೆದಿದೆ. ತುರ್ಕಮೆನಿಸ್ತಾನದ ಅಶ್ಗಾಬತ್ನಿಂದ ವಿಶೇಷ ಸ್ಥಳಾಂತರಿಸುವ ವಿಮಾನವು ಜೂನ್ 21 ರಂದು 3 ಗಂಟೆಗೆ ನವದೆಹಲಿಗೆ ಬಂದಿಳಿದಿದೆ. ಈ ಮೂಲಕ ಯುದ್ಧ ಪೀಡಿತ ಪ್ರದೇಶದಿಂದ ವಿಮಾನದ ಮೂಲಕ 500 ಕ್ಕೂ ಹೆಚ್ಚು ಭಾರತೀಯರು ಆಗಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಇರಾನ್ನಿಂದ ಸ್ಥಳಾಂತರಿಸಿದ 290 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುವ ವಿಶೇಷ ವಿಮಾನವು ನವದೆಹಲಿಯನ್ನು ತಲುಪಿತು. ಗುರುವಾರ, 110 ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದಿಗೆ ಶನಿವಾರ ಒಂಬತ್ತನೇ ದಿನಕ್ಕೆ ಪ್ರವೇಶಿಸಿದೆ. “ಆಪರೇಷನ್ ರೈಸಿಂಗ್ ಲಯನ್” ನ ಭಾಗವಾಗಿ ಜೂನ್ 13 ರಂದು ಇಸ್ರೇಲ್ ಇರಾನ್ ಮೇಲೆ ದಾಳಿ ಪ್ರಾರಂಭಿಸಿತು. ಆದರೆ ‘ಆಪರೇಷನ್ ಟ್ರೂ ಪ್ರಾಮಿಸ್ 3’ ಎಂಬ ದೊಡ್ಡ ಪ್ರಮಾಣದ ಡ್ರೋನ್ ಮತ್ತು ಕ್ಷಿಪಣಿಯನ್ನು ಹಾರಿಸಿ ಇರಾನ್ ಕೂಡಾ ಪ್ರತೀಕಾರ ತೀರಿಸಿಕೊಂಡಿದೆ.
Beauty care- Banana peel ಹೊಳೆಯುವ ಚರ್ಮ ನಿಮ್ಮದಾಗಬೇಕಾ? ಬಾಳೆಹಣ್ಣಿನ ಸಿಪ್ಪೆಯಿಂದ ಜಸ್ಟ್ ಈ ರೀತಿ ಮಾಡಿ