newsics.com
ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ಹಸುವಿನ ಕೆಚ್ಚಲಿಗೆ ಮಚ್ಚಿನಿಂದ ಹೊಡೆದು ಹತ್ಯೆ ನಡೆಸಿದ ಘಟನೆ ಯಶವಂತಪುರ ಸಮೀಪದ ಸೂಲಿವಾರದ ಬಳಿ ನಡೆದಿದೆ.
ಮರಿಬಸವಯ್ಯ ಎಂಬುವವರ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ದುಷ್ಕೃತ್ಯ ಮೆರೆದಿದ್ದಾರೆ.
ಚುನಾವಣೆ ಸಂಬಂಧ 2 ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿತ್ತು, ಈ ಕಾರಣಕ್ಕೆ ಹಸು ಬಲಿಯಾಗಿದೆ ಎನ್ನಲಾಗಿದೆ.
ನಿನ್ನೆ ಮಧ್ಯಾಾಹ್ನ 3 ಗಂಟೆ ಸುಮಾರಿಗೆ ಹಸು ಮೇಯಲು ಹೋಗಿದ್ದಾಗ ಹಸುವಿನ ಕೆಚ್ಚಲು ಕತ್ತರಿಸಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಹಸುವಿನ ರೋಧನೆ ಕೇಳಿ ಓಡಿಬಂದ ಸ್ಥಳೀಯರು ಕೂಡಲೇ ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರ ನೋವಿನಿಂದ ನರಳಿದ ಹಸು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
Health tips : ಅತಿಯಾಗಿ ಮೊಬೈಲ್ ನೋಡುವಾಗ ಕಣ್ಣಿನಲ್ಲಿ ನೀರು ಬರುತ್ತಾ? ಕಾರಣವೇನು?