newsics.com
ಬೆಂಗಳೂರು: 18 ವರ್ಷಗಳಿಂದ ಕಾಯುತ್ತಿದ್ದ ವಿಜಯೋತ್ಸವದ ಖುಷಿ ಕೇವಲ ಮೂವತ್ತು ನಿಮಿಷದಲ್ಲಿ ನಿನ್ನೆಯ ದಿನ (ಜೂ. 4) ಮೌನವಾಯಿತು.
ಆರ್ ಸಿಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವು ಹಾಗೂ ಹಲವರು ಗಾಯಗೊಂಡಿರುವ ದುರಂತದ ಬೆನ್ನಲ್ಲೇ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ವಾದ ವಿವಾದ ಆಲಿಸಿ ಘಟನೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚನೆ ನೀಡಿ ಜೂನ್ 10 ಕ್ಕೆ ವಿಚಾರಣೆ ಮುಂದೂಡಿದೆ.