newsics.com
ಬೆಂಗಳೂರು: ಆರ್ ಸಿ ಬಿ ಗೆಲುವಿನ ಸಂಭ್ರಮಾಚರಣೆಗೆ ಇದೀಗ ದುರಂತವಾಗಿ ಮಾರ್ಪಟ್ಟಿದೆ.
ಪೂರ್ವ ತಯಾರಿ ಇಲ್ಲದೆ ನಡೆದ ಸಂಭ್ರಮಾಚರಣೆಗೆ ಹತ್ತಕ್ಕೂ ಹೆಚ್ವು ಮಂದಿ ಬಲಿಯಾಗಿದ್ದಾರೆ. ಸರ್ಕಾರದ ತರಾತುರಿಗೆ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜನಾಕ್ರೋಶ ವ್ಯಕ್ತವಾಗುತ್ತಿದೆ.
ಕಾಲ್ತುಳಿತಕ್ಕೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಸರ್ಕಾರದ ವಿರುದ್ಧ ಜನಾಕ್ರೋಶ ತೀವ್ರಗೊಳ್ಳುತ್ತಿದೆ.
ಎಂಟು ವರ್ಷಗಳ ಬಳಿಕ ಆರ್ ಸಿ ಬಿ ಗೆಲುವಿನ ಸಂಭ್ರಮ ಸೂತಕವಾಗಿ ಮಾರ್ಪಟ್ಟಿದೆ. ಪೂರ್ವತಯಾರಿ ಇಲ್ಲದೆ ತರಾತುರಿಯಲ್ಲಿ ನಡೆದ ಸಂಭ್ರಮಾಚರಣೆಗೆ ಈವರೆಗೆ 10ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಹಲವು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ದಿಢೀರ್ ಆಗಿ ಬುಧವಾರ ಬೆಳಗ್ಗೆ ಆರ್ ಸಿ ಬಿ ತಂಡಕ್ಕೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಹೇಳಿಕೆ ಕೊಡುತ್ತಾರೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ಹೇಳಿಕೆಯಲ್ಲೇ ಸಾಕಷ್ಟು ಗೊಂದಲ ಇದ್ದವು.
ಸಂಭ್ರಮಾಚರಣೆಗೆ ಎಲ್ಲಿ ಅವಕಾಶ ಕೊಡಬೇಕು? ವಿಜಯ ಯಾತ್ರೆಗೆ ಅವಕಾಶ ಕೊಡಬೇಕೋ ಬೇಡವೋ ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು.
ಅಂತಿಮವಾಗಿ ವಿಧಾನಸೌಧದಲ್ಲಿ ಅಭಿನಂದನಾ ಸಮಾರಂಭ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ನಿರ್ಧಾರ ಮಾಡಲಾಯಿತು.
ಯಾವಾಗ ಆರ್ ಸಿ ಬಿ ಆಟಗಾರರು ಬೆಂಗಳೂರಿಗೆ ಬರುತ್ತಾರೆ ಎಂಬುದು ಬಹಿರಂಗವಾಯ್ತೋ ಅಭಿಮಾನಿಗಳ ತಂಡ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಸೇರತೊಡಗಿದರು.
ವಿಧಾನಸೌಧದ ಹೈಕೋರ್ಟ್ ಗೇಟ್ ಹೊರಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರತೊಡಗಿದರು. ಕೆಲವರು ಗೇಟ್ ಹತ್ತಿ ವಿಧಾನಸೌಧದ ಒಳಗಡೆ ನುಗ್ಗುವ ಪ್ರಯತ್ನವನ್ನು ಮಾಡಿದ್ದರು.
ಅಭಿಮಾನಿಗಳ ಹುಟ್ಟಾಟ, ಅತಿರೇಕವನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಸವಾಲಾಗತೊಡಗಿತು. ಕೊನೆಗೂ ಇದು ದುರಂತವಾಗಿ ಮಾರ್ಪಟ್ಟಿತು.
ಬಿಜೆಪಿ ಆರೋಪ:
ಯಾವುದೇ ಪೂರ್ವ ತಯಾರಿ ಇಲ್ಲದೆ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ಆರೋಪ ಮಾಡಿದೆ. ಅಭಿಮಾನಿಗಳ ಸಾವಿಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಕಾರಣ ಎಂದು ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
RCB celebration ವಿಧಾನಸೌಧದ ಮುಂಭಾಗ`RCB’ ಆಟಗಾರರಿಗೆ ಸನ್ಮಾನಿಸಿದ CM ಸಿದ್ದರಾಮಯ್ಯ, DCM ಡಿಕೆಶಿ