newsics.com
ದಂಪತಿ ಎಷ್ಟೇ ಅನ್ಯೋನ್ಯವಾಗಿದ್ದರೂ ಕೆಲವು ಸಮಯ ದೂರ ದೂರ ಇರಬೇಕಾಗುತ್ತದೆ. ಹಿಂದಿನಿಂದಲೂ ಹಿರಿಯರು ಕೆಲವು ಆಚಾರ ವಿಚಾರಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಅವುಗಳನ್ನು ನಾವು ಗಾಳಿಗೆ ತೂರಿ ಬಿಡುವ ಬದಲು ಅವುಗಳನ್ನು ಅರಿತು ಅನುಸರಿಸುವುದು ಬಹಳ ಉತ್ತಮ.
ಗಂಡ- ಹೆಂಡತಿ ಕೆಲವು ದಿನಗಳಲ್ಲಿ ಸೇರಬಾರದು. ಇದು ದಂಪತಿ ಮತ್ತು ಹುಟ್ಟುವ ಮಕ್ಕಳಿಗೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ ಇವುಗಳನ್ನು ಎಲ್ಲರೂ ಅನುಸರಿಸುವುದಿಲ್ಲ. ನಂಬಿಕೆ ಇರುವವರಷ್ಟೇ ಪಾಲನೆ ಮಾಡುತ್ತಾರೆ.
ಹಾಗಾದರೆ ದಂಪತಿ ಯಾವಾಗ ದೈಹಿಕ ಸಂಪರ್ಕ ಹೊಂದುವುದು ಒಳ್ಳೆಯದಲ್ಲ? ಹೀಗೆ ಹೇಳುವುದಕ್ಕೆ ಕಾರಣವೇನು?
ಭಾಗವತ ಪುರಾಣದಲ್ಲಿ ತಿಳಿಸಿರುವಂತೆ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಸೇರಬಾರದು. ಏಕೆಂದರೆ ಅದು ದೇವತೆಗಳು ಸಂಚಾರ ಮಾಡುವ ಸಮಯ ಹಾಗೂ ದೇವತೆಗಳು ಪೂಜೆ ಮಾಡುವ ಸಮಯ. ಆದ್ದರಿಂದ ಈ ಸಮಯದಲ್ಲಿ ದಂಪತಿ ಮಿಲನ ಹೊಂದುವುದು ಅಥವಾ ಸೇರುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.
ಸಾಯಂಕಾಲದ ಸಮಯದಲ್ಲಿಯೂ ಸಹ ದಂಪತಿ ಸೇರಬಾರದು ಅಥವಾ ಕೂಡಬಾರದು ಎಂದು ಹೇಳಲಾಗಿದೆ. ಏಕೆಂದರೆ ಈ ಸಮಯದಲ್ಲಿ ಗಂಡ- ಹೆಂಡತಿ ಸೇರಿದರೆ ಮುಂದೆ ಕೆಟ್ಟ ಗುಣವಿರುವ ಮಕ್ಕಳು ಜನಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಮುಸ್ಸಂಜೆ ಹೊತ್ತಿನಲ್ಲಿ ಕೂಡಬಾರದು.
ವ್ರತ ಇರುವಂತಹ ಸಮಯದಲ್ಲಿ ಅಂದರೆ ವರಮಹಾಲಕ್ಷ್ಮೀ ವ್ರತ, ಸತ್ಯನಾರಾಯಣ ಪೂಜೆ, ಗಣಪತಿ ಪೂಜೆ ಮತ್ತಿತರ ವ್ರತದ ಸಮಯದಲ್ಲಿ ಅಂದರೆ ಆ ದಿನಗಳ ರಾತ್ರಿ ಸಮಯದಲ್ಲಿ ದಂಪತಿ ಯಾವುದೇ ಕಾರಣಕ್ಕೂ ಸೇರಲೇಬಾರದು ಎಂದು ಹೇಳಲಾಗುತ್ತದೆ.
ಗ್ರಹಣದ ಸಮಯದಲ್ಲಿ ಅಂದರೆ ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣವಿರುವ ಸಮಯದಲ್ಲಿ ದಂಪತಿ ಯಾವುದೇ ಕಾರಣಕ್ಕೂ ಸಂಪರ್ಕ ಮಾಡಬಾರದು.
ರಜಸ್ವಲೆ ಅಂದರೆ ಮುಟ್ಟಿನ ಅವಧಿ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಮಿಲನ ಹೊಂದಬಾರದು. ಸಾಮಾನ್ಯವಾಗಿ ಆ ಐದು ದಿನಗಳಲ್ಲಿ ಗಂಡ- ಹೆಂಡತಿ ಸೇರುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಆದಷ್ಟು ನೈರ್ಮಲ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಲಾಗುತ್ತದೆ.
Belts ಪುರುಷರು ಹೆಚ್ಚಾಗಿ ಬೆಲ್ಟ್ ಧರಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ!