newsics.com
ರಜೆ ಕೇಳಿದ್ದಕ್ಕೆ ಉದ್ಯಮಿಯೊಬ್ಬರು ಚಾಲಕನಿಗೆ ಕಪಾಳಕ್ಕೆ ಹೊಡೆದ ಘಟನೆ ಭೋಪಾ ರಸ್ತೆಯಲ್ಲಿರುವ ಉದ್ಯಮಿಯ ಕಚೇರಿಯಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾನ್ಪುರ ದೇಹಾತ್ನ ಮನೋಜ್ ಯಾದವ್ ಎಂಬ ಚಾಲಕನನ್ನು ಸುಮಾರು 20 ಬಾರಿ ತಾನೇ ಕಪಾಳಕ್ಕೆ ಹೊಡೆದುಕೊಳ್ಳುವಂತೆ ಬಲವಂತಪಡಿಸಲಾಗಿದೆ. ಆತ ಹೊಡೆದುಕೊಳ್ಳುವುದನ್ನು ನಿಲ್ಲಿಸಿದಾಗ, ಉದ್ಯಮಿ ತನಗೆ ಇನ್ನೂ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ವಿಡಿಯೊದ ಉದ್ದಕ್ಕೂ ಅಸಭ್ಯ ಭಾಷೆಯನ್ನು ಸಹ ಬಳಸಲಾಗಿದೆ.
ತಾತನ ಅನಾರೋಗ್ಯದ ಕಾರಣದಿಂದ ಉದ್ಯಮಿಯಿಂದ ಹತ್ತು ಸಾವಿರ ರೂಪಾಯಿ ಸಾಲ ಪಡೆದಿದ್ದ ಮನೋಜ್ ರಜೆ ಕೇಳಿದ್ದೇ ಈ ಘರ್ಷಣೆಗೆ ಕಾರಣ ಎಂದು ಹೇಳಲಾಗಿದೆ. ಆದರೆ ಉದ್ಯಮಿ ಆತನನ್ನು ಕರೆಸಿ ಅವಮಾನಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.