newsics.com
ಉತ್ತರ ಪ್ರದೇಶ: ಪುರುಷರ ಅಗತ್ಯವಿಲ್ಲವೆಂದು ಇಬ್ಬರು ಸ್ನೇಹಿತೆಯರು ಮದುವೆಯಾಗಿರುವ ಘಟನೆ ಉತ್ತರಪ್ರದೇಶದ ಬದೌನ್ನಲ್ಲಿ ನಡೆದಿದೆ.
ತಮ್ಮ ಗಂಡಂದಿರಿಂದ ದ್ರೋಹವಾದಾಗ ಇವರು ಪರಸ್ಪರ ವಿವಾಹವಾಗಲು ನಿರ್ಧರಿಸಿದರು. ಶಿವ ದೇವಾಲಯಕ್ಕೆ ಹೋಗಿ ಪರಸ್ಪರ ಪುಷ್ಪಮಾಲೆ ಧರಿಸಿ ಸಪ್ತಪದಿ ತುಳಿದು ಒಟ್ಟಿಗೆ ಬದುಕಲು ಪ್ರತಿಜ್ಞೆ ಮಾಡಿದರು. ಈ ಇಬ್ಬರೂ ತಮ್ಮ ಜೀವನದುದ್ದಕ್ಕೂ ಗಂಡ ಹೆಂಡತಿಯಂತೆ ಒಬ್ಬರನ್ನೊಬ್ಬರು ಬೆಂಬಲಿಸಿಕೊಂಡು ಬದುಕಲು ನಿರ್ಧರಿಸಿದ್ದಾರೆ
ಮದುವೆಯ ನಂತರ ಸೋನು (ಕಾಲ್ಪನಿಕ ಹೆಸರು) ಪತಿಯಾದರೆ, ರೀಟಾ (ಕಾಲ್ಪನಿಕ ಹೆಸರು) ಹೆಂಡತಿಯಾಗಿದ್ದಾಳೆ. ಸೋನು ಈ ಹಿಂದೆ ಪಶ್ಚಿಮ ದೆಹಲಿಯಲ್ಲಿ ಶಿಶುಪಾಲನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ರೀಟಾ ಡೆಹ್ರಾಡೂನ್ನ ಭದ್ರತಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಸ್ತುತ ಇಬ್ಬರೂ ಬದೌನ್ನಲ್ಲಿದ್ದು, ಮದುವೆ ನಂತರ ಭವಿಷ್ಯದ ಜವಾಬ್ದಾರಿಗಳನ್ನ ನಿರ್ವಹಿಸಲು ಸಜ್ಜಾಗಿದ್ದಾರೆ. ಇಬ್ಬರೂ ತಮ್ಮ ನಿರ್ಧಾರದ ಬಗ್ಗೆ ತಮ್ಮ ಕುಟುಂಬಗಳಿಗೆ ತಿಳಿಸಿದ್ದಾರಂತೆ. ಒಂದು ವೇಳೆ ಕುಟುಂಬಸ್ಥರು ತಮಗೆ ಬೆಂಬಲ ನೀಡಿದ್ರೆ ಉತ್ತಮ ಜೀವನ ನಡೆಸುವುದಾಗಿ ತಿಳಿಸಿದ್ದಾರೆ.