newsics.com
ಇಸ್ಲಾಮಾಬಾದ್: ಇದೀಗ ಭಾರತ ನಡೆಸುತ್ತಿರುವ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಭಾರತೀಯ ಸಶಸ್ತ್ರ ಪಡೆಗಳು ಪಿಒಕೆ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿ 9 ಕಡೆಗಳಲ್ಲಿ ದಾಳಿ ನಡೆಸಿತ್ತು. ನಂತರ ಶೆಹಬಾಜ್ ತಮ್ಮ ಭಾಷಣದಲ್ಲಿ ಪಾಕಿಸ್ತಾನದಲ್ಲಿ ಮೃತಪಟ್ಟವರ ಹನಿ ರಕ್ತದ ಪ್ರತೀಕಾರವನ್ನು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಷರೀಫ್ ಅವರ ಮಾತುಗಳು ದೇಶಭಕ್ತಿಯನ್ನು ಹುಟ್ಟುಹಾಕುವ ಬದಲು, ಪ್ರಧಾನಿಯವರ ನಿಧಾನಗತಿಯ ಭಾಷಣವನ್ನು ಟೀಕಿಸಿದ ಪಾಕಿಸ್ತಾನಿ ನಾಗರಿಕರ ಕೋಪಕ್ಕೆ ಗುರಿಯಲಿದ್ದಾರೆ.
ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಅಂತ್ಯಗೊಂಡಿರುತ್ತೆ ಎಂದು ಅನೇಕ ಪಾಕಿಸ್ತಾನಿ ನಾಗರಿಕರು ತಮ್ಮ ಪ್ರಧಾನಿಯವರ ನಿಧಾನ ಭಾಷಣದಿಂದ ಸಿಟ್ಟಾಗಿದ್ದಾರೆ.
ಪಾಕಿಸ್ತಾನಿ ಬಳಕೆದಾರರೊಬ್ಬರು, “ಶೆಹಬಾಜ್ ಅಂಕಲ್ ದಯವಿಟ್ಟು ಸ್ವಲ್ಪ ಫಾಸ್ಟ್ ಆಗಿ ಮಾತನಾಡಿ, ನಮಗೆ ಪ್ರತಿಯೊಂದು ವಿಷಯದ ಬಗ್ಗೆ ಭಾಷಣ ಬೇಡ, ದಯವಿಟ್ಟು ವಿಷಯಕ್ಕೆ ಬನ್ನಿ” ಎಂದು ಹೇಳಿದ್ದಾರೆ. ಮತ್ತೊಬ್ಬರು ಶೆಹಬಾಜ್ ಷರೀಫ್ನನ್ನು ಹೇಡಿ ಎಂದು ಕರೆದಿದ್ದಾರೆ.ಮತ್ತೊಬ್ಬ ಕಮೆಂಟ್ ಮಾಡಿದ್ದು, ಶಹಬಾಜ್ ಷರೀಫ್ ಅವರ ಭಾಷಣದ ವೇಗವನ್ನು ನೋಡಿದರೆ, ಯುದ್ಧ ಕೊನೆಗೊಳ್ಳಬಹುದು ಆದರೆ ಅವರ ಭಾಷಣ ಮುಗಿಯುವುದಿಲ್ಲ ಎಂದಿದ್ದಾರೆ.