newsics.com
ನವದೆಹಲಿ: ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ವಿರುದ್ಧ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ನಿಖರವಾದ ದಾಳಿ ನಡೆಸಿತ್ತು. ಈ ಬೆನ್ನಲ್ಲೇ ಪಾಕ್ನ ಹೆಚ್ಕ್ಯೂ-9 ವಾಯು ರಕ್ಷಣಾ ಕ್ಷಿಪಣಿ ಉಡಾವಣಾ ಘಟಕಗಳೇ ಭಾರಿ ಹಾನಿಗೊಳಗಾಗಿವೆ. ಭಾರತದ 15 ನಗರಗಳನ್ನು ಪಾಕ್ ಟಾರ್ಗೆಟ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಭಾರತ ದಿಟ್ಟ ಉತ್ತರ ನೀಡಿದ್ದು, ಲಾಹೋರ್ನ ಏರ್ಡಿಫೆನ್ಸ್ ಅನ್ನು ಉಡೀಸ್ ಮಾಡಿದೆ.
ಅಲ್ಲದೇ ಪಾಕ್ ಭಾರತದ ವಿರುದ್ಧ ದಾಳಿ ನಡೆಸಲು ಪ್ಲಾನ್ ಮಾಡುತ್ತಲೇ ಇದೆ ಎಂದು ವರದಿಯಾಗಿತ್ತು. ಆದ್ರೆ ಪಾಪಿ ಪಾಕಿಸ್ತಾನದ ಈ ಪ್ಲಾನ್ ಅನ್ನೇ ಭಾರತೀಯ ಸೇನೆ ಛಿದ್ರ ಛಿದ್ರ ಮಾಡಿಬಿಟ್ಟಿದೆ. ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಪಾಕ್ಗೆ ಇಂಡಿಯನ್ ಆರ್ಮಿ ತಕ್ಕ ಶಾಸ್ತಿ ನೀಡಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರ (ಪಿಒಜೆಕೆ)ದೊಳಗಿನ ಒಂಬತ್ತು ಭಾರತ ವಿರೋಧಿ ಭಯೋತ್ಪಾದಕ ತಾಣಗಳನ್ನು ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಾಶಪಡಿಸಿದೆ. ಇದರ ಜೊತೆಗೆ ಪಾಕ್ ರಕ್ಷಣಾ ಘಟಕವೂ ಹಾನಿಗೊಂಡಿದೆ