newsics.com
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವ ಕೆಲಸ ಒಂದೊಂದಾಗಿ ನಡೆಯುತ್ತಿದೆ. ಪಾಕಿಸ್ತಾನದ ಜೊತೆಗಿನ ಎಲ್ಲ ಸಂಬಂಧವನ್ನು ಮುರಿದುಕೊಂಡಿರುವ ಭಾರತ ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಿ, ಸಿಂಧೂ ನದಿ ನೀರು ಹರಿವು ನಿಲ್ಲಿಸಿ ತಕ್ಕ ತಿರುಗೇಟು ನೀಡಿತ್ತು.
ಇದರ ನಡುವೆ ಪಾಕಿಸ್ತಾನದ ರಾಜಕಾರಣಿ ಶೇರ್ ಅಫ್ಜಲ್ ಖಾನ್ ಮಾರ್ವತ್ ಹೇಳಿಕೆ ವೈರಲ್ ಆಗಿದೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿರುವ ಮಾರ್ವತ್ ಅವರನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೆ ನೀವು ಹೋರಾಡುತ್ತೀರಾ ಎಂದು ವರದಿಗಾರರೊಬ್ಬರು ಕೇಳಿದಾಗ, “ಯುದ್ಧ ಉಲ್ಬಣಗೊಂಡರೆ, ನಾನು ಇಂಗ್ಲೆಂಡ್ಗೆ ಹೋಗುತ್ತೇನೆ” ಎಂದು ಅವರು ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅದೇ ವೀಡಿಯೊದಲ್ಲಿ, ವರದಿಗಾರರೊಬ್ಬರು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಲ್ಲಿ ಸಂಯಮದಿಂದ ವರ್ತಿಸಬೇಕು ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮಾರ್ವತ್, “ಮೋದಿ ಮೇರಾ ಖಾಲಾ ಕಾ ಬೇಟಾ ಹೈ ಜೋ ಮೇರೆ ಕೆಹ್ನೆ ಸೆ ಪೀಚೆ ಜಾಯೇಗಾ? (ನಾನು ಹಾಗೆ ಹೇಳಿದ ಮಾತ್ರಕ್ಕೆ ಮೋದಿ ನನ್ನ ಚಿಕ್ಕಮ್ಮನ ಮಗ ಹಿಂದೆ ಸರಿಯುತ್ತಾನೆಯೇ?) ಎಂದು ಕೇಳಿದ್ದಾರೆ.