newsics.com
ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ವಿಚಾರ ಈಗ ಕರ್ನಾಟಕದ ಹಾಟ್ ಟಾಪಿಕ್ ಆಗಿದೆ. ಸಂದರ್ಶನವೊಂದರಲ್ಲಿ ತಾನು ಈ ವರ್ಷವೇ ಮದುವೆ ಆಗುವುದಾಗಿ ಅನುಶ್ರೀ ಹೇಳಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ಆ್ಯಂಕರ್ ಅನುಶ್ರೀ ಮದುವೆ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಟ್ರೋಲರ್ಗಳು ಆಗಾಗ ಅನುಶ್ರೀ ಮದುವೆನೂ ಮಾಡ್ತಾನೇ ಇರ್ತಾರೆ. ಆದರೆ, ಅನುಶ್ರೀ ಇದನ್ನ ತಮಾಷೆಯಾಗಿಯೇ ತೆಗೆದುಕೊಳ್ಳುತ್ತಾರೆ. ಡೋಂಟ್ ಕೇರ್ ಅನ್ನೋ ರೀತಿಯಲ್ಲೂ ರಿಯಾಕ್ಟ್ ಮಾಡ್ತಾರೆ. ಆದರೆ ಇತ್ತೀಚೆಗೆ ಅನುಶ್ರೀ ಅವರು ಶೀಘ್ರದಲ್ಲೇ ಮದುವೆ ಎಂದಿದ್ದರು. ಅಷ್ಟೇ ಅಲ್ಲ, ತಮ್ಮ ಕನಸಿಕ ಹುಡುಗನ ಬಗ್ಗೆಯೂ ಮಾತನಾಡಿದ್ದರು.
ಇತ್ತೀಚೆಗೆ ಗಿಲ್ಲಿ ನಟ ಅವರು ಸಿಂಧನೂರಿನಲ್ಲಿ ಸರಿಗಮಪ ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಅವರು ಅನುಶ್ರೀಗೆ ರಿಂಗ್ ಹಾಕಿದ್ದಾರೆ. ಈ ಸಂದರ್ಭದ ಪ್ರೋಮೋ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಮೇ ಐ ಕಮಿನ್ ಎನ್ನುತ್ತಾ ಗಿಲ್ಲಿ ನಟ ಅವರು ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಮೇಲೆ ಅನುಶ್ರೀ ಅವರ ಕೈಗೆ ರಿಂಗ್ ಹಾಕಿದ್ದಾರೆ.ಸದ್ಯ ಆ ವೀಡಿಯೋ ವೈರಲ್ ಆಗುತ್ತಿದೆ.
ಅನುಶ್ರೀ ನಿರೂಪಕಿ ಆಗಿಯೇ ಗುರುತಿಸಿಕೊಂಡಿದ್ದಾರೆ. ಆದರೆ, ನಟನೆಯ ಆಸಕ್ತಿ ಇದ್ದ ಕಾರಣ, ಸಿನಿಮಾ ಕೂಡ ಮಾಡಿದ್ದಾರೆ. ಬೆಂಕಿಪಟ್ನ ಚಿತ್ರದಲ್ಲಿ ಹೀರೊಯಿನ್ ಆಗಿಯೂ ಗಮನ ಸೆಳೆದಿದ್ದರು. ಕಮಲ್ ಹಾಸನ್ ಅಭಿನಯದ ಉತ್ತಮ್ ವಿಲನ್ ಚಿತ್ರದಲ್ಲೂ ಅನುಶ್ರೀ ಗೆಸ್ಟ್ ರೋಲ್ ಮಾಡಿದ್ದಾರೆ.ಬಹು ಬೇಡಿಕೆಯ ಯುಟ್ಯೂಬ್ ಚಾನೆಲ್ ಇದು ಅನ್ನುವ ಮಟ್ಟಿಗೆ ಕಂಟೆಂಟ್ ಕೊಟ್ಟಿದ್ದಾರೆ.
https://www.instagram.com/p/DItORO9zvQk/?img_index=2&igsh=cHI5OTE4cXhjdG9m