newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ವಿಶ್ವಾವಸು ಸಂವತ್ಸರ ಉತ್ತರಾಯಣ ವೈಶಾಖ ಮಾಸ ಶುಕ್ಲ ಪಕ್ಷ ತದಿಗೆ, 30-04-2025, ಬುಧವಾರ.
ದಿನ ವಿಶೇಷ
ಅಕ್ಷತ್ ತೃತೀಯ(ಅಕ್ಷಯ ತೃತೀಯ), ಪರಶುರಾಮ ಜಯಂತಿ, ಬಸವ ಜಯಂತಿ
—
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ಉತ್ತರಾಯಣ
ದಿನಾಂಕ – 30/04/2025
ತಿಂಗಳು – ಏಪ್ರಿಲ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ ತೃತೀಯ 14:11:31
ಪಕ್ಷ ಶುಕ್ಲ
ನಕ್ಷತ್ರ ರೋಹಿಣಿ 16:17:05
ಯೋಗ ಶೋಭನ 12:00:30
ಕರಣ ಗರಜ 14:11:32
ಕರಣ ವಾಣಿಜ 24:42:54*
ತಿಂಗಳು (ಅಮಾವಾಸ್ಯಾಂತ್ಯ) ವೈಶಾಖ
ತಿಂಗಳು (ಹುಣ್ಣಿಮಾಂತ್ಯ) ವೈಶಾಖ
ಚಂದ್ರ ರಾಶಿ ವೃಷಭ till 27:13:54*
ಚಂದ್ರ ರಾಶಿ ಮಿಥುನ from 27:13:54*
ಸೂರ್ಯ ರಾಶಿ ಮೇಷ
ಋತು ವಸಂತ
ಸೂರ್ಯೋದಯ 06:00:29
ಸೂರ್ಯಾಸ್ತ 18:33:18
ಹಗಲಿನ ಅವಧಿ 12:32:48
ರಾತ್ರಿಯ ಅವಧಿ 11:26:45
ಚಂದ್ರೋದಯ 08:00:12
ಚಂದ್ರಾಸ್ತ 21:30:42
ರಾಹು ಕಾಲ 12:17 – 13:51ಅಶುಭ
ಯಮಘಂಡ ಕಾಲ 07:35 – 09:09 ಅಶುಭ
ಗುಳಿಕ ಕಾಲ 10:43 – 12:17
ಅಭಿಜಿತ್ 11:52 – 12:42 ಅಶುಭ
ದುರ್ಮುಹೂರ್ತ 11:52 – 12:42 ಅಶುಭ
==
ಇಂದಿನ ಮಾತು
ಪ್ರತಿ ಮುಂಜಾನೆಯೂ ನಮ್ಮ ಬದುಕನ್ನು ಹೊಸ ರೀತಿಯಲ್ಲಿ ರೂಪಿಸಿಕೊಳ್ಳಲು ಇರುವ ಮತ್ತೊಂದು ಸದವಕಾಶ.
==
ಇಂದಿನ ಸುಭಾಷಿತ
ದಾನಂ ಯಜ್ಞಾಃ ಸತಾಂ ಪೂಜಾ
ವೇದಧಾರಣಮಾರ್ಜವಮ್ |
ಏಷ ಧರ್ಮಃ ಪರೋ ರಾಜನ್
ಬಲವಾನ್ ಪ್ರೇತ್ಯ ಚೇಹ ಚ ||
(ಮಹಾಭಾರತ)
ರಾಜನೇ! ದಾನ, ಯಜ್ಞ, ಸತ್ಪುರುಷ ಪೂಜೆ, ವೇದಾಭ್ಯಾಸ, ಸರಳತೆ- ಇವುಗಳು ಉತ್ತಮವಾದ ಧರ್ಮಗಳು ಹಾಗೂ ಈ ಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಬಲಿಷ್ಠವಾದವುಗಳು.
==
ಇಂದಿನ ಓದು
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ |
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ || 16 ||
ಭ್ರಾಜಿಷ್ಣು ಎಂದರೆ ಬೆಳಕಿನ ಪುಂಜವಾಗಿ ಪ್ರಕಾಶಿಸುವವನು ಎಂದರ್ಥ. ಗೀತೆಯಲ್ಲಿ ಕೃಷ್ಣ ಹೇಳುವಂತೆ:
ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ ।
ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ||ಅ-೧೦, ಶ್ಲೋ-೨೧||
ಅಂದರೆ ರವಿಯಲ್ಲಿ ರವಿಯಾಗಿ ಪ್ರತೀ ಕಿರಣದಲ್ಲಿ ನಾನಿದ್ದೇನೆ ಎಂದರ್ಥ.
ಈ ಪದವನ್ನು ಒಡೆದು ನೋಡುವುದಾದರೆ ಭ್ರಾ+ವಿಷ್ಣು, ಇಲ್ಲಿ ‘ಭ್ರಾ’ ಎಂದರೆ ‘ಭರಣ’. ಆದ್ದರಿಂದ ಭ್ರಾಜಿಷ್ಣು ಎಂದರೆ ಎಲ್ಲವನ್ನೂ ಧರಿಸಿದವನು, ಈ ಪದವನ್ನು ಮುಂದಕ್ಕೆ ಒಡೆದರೆ, ಭ+ಆಜಿ+ಷ್ಣು. ಇಲ್ಲಿ ‘ಆಜಿ’ ಎಂದರೆ ಯುದ್ಧ, ‘ಭ’ ಎಂದರೆ ಗೆಲ್ಲುವಂತೆ ಮಾಡುವವನು, ‘ಷ್ಣು’ ಎಂದರೆ ಎಲ್ಲರ ಒಳಗೆ ನಿಂತು ಪ್ರೇರಣೆ ಮಾಡುವವ. ಆದ್ದರಿಂದ ಭ್ರಾಜಿಷ್ಣು ಎಂದರೆ, ನಾವು ನಮ್ಮ ಒಳಗೇ ಇರುವ ವೈರಿಗಳಾದ ಕಾಮ, ಕ್ರೋಧ, ಮದ, ಮತ್ಸರ ಇತ್ಯಾದಿ ವೈರಿಗಳ ವಿರುದ್ಧ ಹೋರಾಟದಲ್ಲಿ ನಮಗೆ ಗೆಲುವನ್ನು ತಂದುಕೊಡುವವನು. ಇದು ನಮಗೆ ಭಗವಂತ ಕೊಡುವ ಶಿಕ್ಷಣ. ದೇವತೆಗಳು ನಮ್ಮನ್ನು ಪರೀಕ್ಷೆಗೆ ಒಡ್ಡಿ ನಮಗೆ ಶಿಕ್ಷಣ ಕೊಡುತ್ತಾರೆ. ಇಂತಹ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಿ ಹೊರಬರಲು ಭಗವಂತ ನಮಗೆ ಸದಾ ಸಹಕಾರವನ್ನು ಕೊಡುತ್ತಾನೆ. ಆದ್ದರಿಂದ ಇದು ಶಿಕ್ಷೆ ಅಲ್ಲ ಶಿಕ್ಷಣ. ಇಂತಹ ಭಗವಂತ ಭ್ರಾಜಿಷ್ಣು.