newsics.com
ತಿರುಪತಿ ತಿರುಮಲ ಶ್ರೀ ವೆಂಟಕೇಶ್ವರ ಸ್ವಾಮಿಯ ದರ್ಶನಕ್ಕೆ ದೇಶ-ವಿದೇಶಗಳಿಂದ ನಿತ್ಯ ಲಕ್ಷಾಂತರ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ಅನಾನುಕೂಲ ಎದುರಾಗದಂತೆ ಮಾಡಲು ಆಂಧ್ರ ಪ್ರದೇಶ ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇನ್ಮುಂದೆ ವಾಟ್ಸಾಪ್ನಲ್ಲಿ ಒಂದು ಮೆಸೇಜ್ ಕಳುಹಿಸುವ ಮೂಲಕ ಭಕ್ತರು ವಿವಿಧ ಸೇವೆಗಳನ್ನು ಬುಕಿಂಗ್ ಮಾಡಬಹುದಾಗಿದೆ.
ವಾಟ್ಸಾಪ್ ಸಂಖ್ಯೆ 9552300009ಗೆ “ಹಾಯ್” ಎಂದು ಸಂದೇಶ ಕಳುಹಿಸಿದರೆ, ಆಯ್ಕೆ ಮಾಡಿದ ವಿವರಗಳನ್ನು ಅಲ್ಲಿ ನೀಡಲಾಗುತ್ತದೆ. ಮೊದಲ ಆಯ್ಕೆಯಾಗಿ “ಟಿಟಿಡಿ ದೇವಾಲಯಗಳ ಸೇವೆಗಳು” ಇರುತ್ತದೆ. ಇದನ್ನು ಆಯ್ಕೆ ಮಾಡಿದ ನಂತರ, ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ, ಸರ್ವದರ್ಶನ ಲೈವ್ ಸ್ಥಿತಿ, ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ, ಮತ್ತು ಮುಂಗಡ ಠೇವಣಿ ರಿಫಂಡ್ ಲೈವ್ ಸ್ಥಿತಿ ಲಭ್ಯವಿದೆ. ಭಕ್ತರು ತಮಗೆ ಬೇಕಾದ ಮಾಹಿತಿಯನ್ನು ಆಯ್ಕೆ ಮಾಡಿ ಇಲ್ಲಿ ಮಾಹಿತಿನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಪ್ರಸ್ತುತ ಈ ಸೇವೆಗಳು ಪ್ರಾಯೋಗಿಕ ಹಂತದಲ್ಲಿದ್ದು, ಭಕ್ತರಿಗೆ ಟಿಟಿಡಿ ಸೇವೆಗಳನ್ನು ವಾಟ್ಸಾಪ್ ಮೂಲಕ ಇನ್ನಷ್ಟು ಸಮೀಪವಾಗಿಸುವ ಗುರಿಯನ್ನು ಹೊಂದಿದೆ. ಟಿಟಿಡಿ ಸೇವೆಗಳ ವಿವರಗಳು, ದೇಣಿಗೆಗಳ ಜೊತೆಗೆ ಇನ್ನಷ್ಟು ಸೇವೆಗಳನ್ನು ಶೀಘ್ರದಲ್ಲಿ ಲಭ್ಯಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾಟ್ಸಾಪ್ ಸೇವೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
https://www.newsics.com/2025/04/10/90-day-tariff-break-for-all-countries-except-china/