newsics.com
ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. . ಮನೆಯಿಂದ ನಕಾರಾತ್ಮಕತೆಯನ್ನು ತೊಡೆದುಹಾಕುಲು ಮತ್ತು ಧನಾತ್ಮಕತೆಯನ್ನು ವೃದ್ಧಿಸಲು ನಮ್ಮ ಶಾಸ್ತ್ರಗಳಲ್ಲಿ ಸಾಕಷ್ಟು ನಿಯಮಗಳನ್ನು ನೀಡಲಾಗಿದೆ. ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಕೇವಲ ದೇವರ ಕೋಣೆಯಲ್ಲಿ ಮಾತ್ರವಲ್ಲ ತುಳಸಿಯ ಮುಂದೆ ಕೂಡ ದೀಪವನ್ನು ಬೆಳಗುವ ಸಾಂಪ್ರದಾಯ ಹಿಂದೂ ಧರ್ಮದಲ್ಲಿದೆ.
ಶಾಸ್ತ್ರಗಳ ಪ್ರಕಾರ ದೇವರ ಬಲಭಾಗದಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಮತ್ತು ದೇವರ ಎಡಭಾಗದಲ್ಲಿ ಎಣ್ಣೆಯ ದೀಪವನ್ನು ಹಚ್ಚಬೇಕು. ಅಂದರೆ ನೀವು ದೇವರಿಗೆ ದೀಪವನ್ನು ಹಚ್ಚಿಡುವಾಗ ನಿಮ್ಮ ಬಲಭಾಗಕ್ಕೆ ಎಣ್ಣೆಯ ದೀಪವನ್ನು ಮತ್ತು ನಿಮ್ಮ ಎಡಭಾಗಕ್ಕೆ ತುಪ್ಪದ ದೀಪವನ್ನು ಹಚ್ಚಿಡಬೇಕು. ಇದು ನೀವು ದೇವರಿಗೆ ದೀಪವನ್ನು ಬೆಳಗುವ ಸರಿಯಾದ ಮಾರ್ಗವಾಗಿದೆ.
ನೀವು ದೇವರಿಗೆ ದೀಪವನ್ನು ಬೆಳಗಿಸುವಾಗ ಯಾವಾಗಲೂ ದೇವರ ವಿಗ್ರಹ ಅಥವಾ ಚಿತ್ರದ ಮುಂದೆ ಮಾತ್ರ ದೀಪವನ್ನು ಬೆಳಗಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ದೇವರ ವಿಗ್ರಹದ ಹಿಂಭಾಗದಲ್ಲಿ ಅಥವಾ ದೇವರ ವಿಗ್ರಹಕ್ಕಿಂತಲೂ ತುಂಬಾ ದೂದರದಲ್ಲಿ ದೀಪವನ್ನು ಹಚ್ಚಿಡಬಾರದು.
ದೇವರ ದೀಪವನ್ನು ಕೇವಲ ಎಡಭಾಗದಲ್ಲಿ, ಬಲಭಾಗದಲ್ಲಿ ಮಾತ್ರ ಹಚ್ಚಿಡಬೇಕು. ಅದರಲ್ಲೂ ತಪ್ಪಿಯೂ ಪಶ್ಚಿಮ ದಿಕ್ಕಿನಲ್ಲಿ ಮರೆತು ಕೂಡ ದೇವರಿಗೆ ಹಚ್ಚಿಡಬಾರದು. ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಹಚ್ಚಿಡುವುದರಿಂದ ನೀವು ಬಡತನವನ್ನು ಮತ್ತು ಸಂಪತ್ತಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.
https://www.newsics.com/2025/04/07/19-year-old-girl-gang-raped-by-22-men/