newsics.com
ಮ್ಯಾನ್ಮಾರ್ನಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಮೃತಪಟ್ಟರ ಸಂಖ್ಯೆ 3 ಸಾವಿರದ ಸನಿಹ ತಲುಪಿದೆ. ಈವರೆಗೆ ಅಧಿಕೃತವಾಗಿ 2,719 ಜನರು ಮೃತಪಟ್ಟಿದ್ದನ್ನು ಅಲ್ಲಿನ ಮಿಲಿಟರಿ ಆಡಳಿತ ಖಚಿತಪಡಿಸಿದ್ದು 4,521 ಜನ ಗಾಯಗೊಂಡಿದ್ದು 441 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪ್ರಕಟಿಸಲಾಗಿದೆ.
ಹೀಗಾಗಿ ಭೂಕಂಪದಿಂದ ಮೃತರಾದವರ ಸಂಖ್ಯೆ 3 ಸಾವಿರ ದಾಟಬಹುದು ಎಂದು ಅಂದಾಜಿಸಲಾಗಿದೆ.
ಈ ಮಧ್ಯೆ ಮ್ಯಾನ್ಮಾರ್ ನಾಗರಿಕ ದಂಗೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಅಗತ್ಯವಸ್ತುಗಳ ಕೊರತೆ ಎದುರಾಗಿದೆ. ನೆರವು ಕಾರ್ಯಾಚರಣೆಗೆ ಸೇನೆ ತಡೆಯೊಡ್ಡುತ್ತಿದೆ ಎಂದು ಬಂಡುಕೋರ ಗುಂಪುಗಳ ಆರೋಪಿಸುತ್ತಿವೆ. ಭೂಕಂಪದಿಂದ ಬದುಕುಳಿದ ಜನರು ಪಶ್ಚಾತ್ ಕಂಪನಗಳಿಂದು ಭಯಪೀಡಿತರಾಗಿದ್ದು ರಸ್ತೆಯಲ್ಲೇ ರಾತ್ರಿಯನ್ನು ಕಳೆಯುತ್ತಿದ್ದಾರೆ. 442 ಟನ್ ಆಹಾರ ಸಾಮಗ್ರಿ ರವಾನೆ:
ಭೂಕಂಪ ಸಂತ್ರಸ್ತ ಮ್ಯಾನ್ಮಾರ್ಗೆ ಭಾರತ ನೆರವಿನ ಹಸ್ತ ಮುಂದುವರಿಸಿದ್ದು ಮಂಗಳವಾರ ನೌಕಾಪಡೆಯ ಐಎನ್ಎಸ್ ಘರಿಯಾಲ್ ನೌಕೆಯ ಮೂಲಕ 442 ಮೆಟ್ರಿಕ್ ಟನ್ ಆಹಾರ ಸಾಮಗ್ರಿಯನ್ನು ವಿಶಾಖಪಟ್ಟಣದಿಂದ ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರಕಟಿಸಿದ್ದಾರೆ.
MUDA Scam ಸಿಎಂಗೆ ಮುಗಿಯದ ಮುಡಾ ಸಂಕಷ್ಟ!ಇಡಿಯಿಂದ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಕೆ