newsics.com
ಜೈಪುರ: ಅಕ್ರಮ ಸಂಬಂಧ ಬಯಲಾದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಹತ್ಯೆಗೈದ ಆರೋಪದ ಮೇರೆಗೆ ಆತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ರಾಜಸ್ಥಾನದ ಜೈಪುರದಲ್ಲಿ ಬಂಧಿಸಲಾಗಿದೆ.
ಧನಲಾಲ್ ಸೈನಿ ಮೃತಪಟ್ಟ ವ್ಯಕ್ತಿ. ಆರೋಪಿಗಳು ಸೈನಿ ಶವವನ್ನು ಮೂಟೆಯಲ್ಲಿರಿಸಿ, ಬೈಕಲ್ಲಿ ಒಯ್ಯುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ.ಅಕ್ರಮ ಸಂಬಂಧದ ಶಂಕೆಯಲ್ಲಿ ಪತ್ನಿ ಗೋಪಾಲಿ ದೇವಿ ಮತ್ತು ಆಕೆಯ ಪ್ರಿಯಕರನೊಂದಿಗೆ ಮಾ.15ರಂದು ಸೈನಿ ವಾಗ್ವಾದ ನಡೆಸಿದ್ದ. ಈ ವೇಳೆ ಸೈನಿಯನ್ನು ಥಳಿಸಿ ಉಸಿರುಗಟ್ಟಿಸಿ ಕೊಂದು, ಶವ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.