newsics.com
ಬೆಂಗಳೂರು: ಇತ್ತೀಚೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ದರ್ಶನ್ ಮಾಡಿದ ಕೆಲಸ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮೂಹಿಕ ವಿವಾಹದಲ್ಲಿ ಮಾಂಗಲ್ಯ ನೀಡಿದ್ದಾರೆ.
ಪಾಂಡವಪುರದಲ್ಲಿ ಬೇಬಿ ಬೆಟ್ಟದ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ 24 ಜೋಡಿಗಳಿಗೆ ಮಾಂಗಲ್ಯ ದಾನ ಮಾಡಿದ್ದಾರೆ.
ಸುಮಾರು 5 ಗ್ರಾಂ ತೂಕದ ಮಾಂಗಲ್ಯವನ್ನು ವಿಜಯಲಕ್ಷ್ಮಿ ಅವರೇ ಪ್ರತಿ ಜೋಡಿಗೂ ತಮ್ಮ ಕೈಯಿಂದ ವಿತರಿಸಿದರು. ಈ ಸಂದರ್ಭದಲ್ಲಿ ನಟ ಧನ್ವೀರ್ ವರರಿಗೆ ವಾಚ್ ಉಡುಗೊರೆಯಾಗಿ ನೀಡಿದರೆ, ನಟ ಚಿಕ್ಕಣ್ಣ ವರರಿಗೆ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿದರು.