newsics.com
ತಿರುಪತಿಯ ಲಡ್ಡು ಪ್ರಸಾದ ವಿತರಣೆ ಮಾಡುವ ಕೌಂಟರ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಭಕ್ತರು ಮತ್ತೊಮ್ಮೆ ಆತಂಕಗೊಳ್ಳುವಂತೆ ಮಾಡಿದೆ.
ತಿರುಪತಿ ಲಡ್ಡು ಪ್ರಸಾದದ 47ನೇ ಕೌಂಟರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಪ್ರಸಾದದ ಕೌಂಟರ್ನಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ನೆರೆದಿದ್ದ ಭಕ್ತರು ಹೊರಗೆ ಓಡಿ ಹೋಗಿದ್ದಾರೆ. ತಿರುಪತಿ ಲಡ್ಡು ಕೌಂಟರ್ನಲ್ಲಿ ಆಗಿರುವ ಬೆಂಕಿ ಅವಘಡದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://twitter.com/Mediahub360_/status/1878801159315771492
ತಿರುಮಲದಲ್ಲಿ ಲಡ್ಡು ಪ್ರಸಾದಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ರು. ಈ ವೇಳೆ ಕೌಂಟರ್ ನಂ. 47ರಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಕಂಪ್ಯೂಟರ್ನ UPSಗೆ ಬೆಂಕಿ ತಗುಲಿದ್ದು, ಪ್ರಸಾದದ ಕೌಂಟರ್ನಲ್ಲಿ ದಟ್ಟ ಹೊಗೆ ಆವರಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿದೆ ಎಂದು TTD ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರು ಸ್ಪಷ್ಟಪಡಿಸಿದ್ದಾರೆ.