newsics.com
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸುದೀಪ್ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಮಂದಿಗೆ ಕಿಚ್ಚನ ಕೈರುಚಿ ತಿನ್ನುವ ಭಾಗ್ಯ ಸಿಕ್ಕಿದೆ. ಈ ಕುರಿತ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿದೆ.
ಮನೆಯಲ್ಲಿರುವ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಸುದೀಪ್ (Sudeep) ಕಳುಹಿಸಿದ್ದಾರೆ. ಊಟ ಸವಿದು ಸ್ಪರ್ಧಿಗಳು ಖುಷಿಪಟ್ಟಿದ್ದಾರೆ. ಸ್ಪರ್ಧಿಗಳಿಗೆ ಡಿನ್ನರ್ ನೈಟ್ ಅರೆಂಜ್ ಮಾಡಿ ಅವರವರ ಅಭಿರುಚಿ ತಕ್ಕಂತೆ ಊಟವನ್ನು ಕಿಚ್ಚ ಕಳುಹಿಸಿದ್ದಾರೆ
ಸುದೀಪ್ ಕಳುಹಿಸಿದ ಊಟ ಸವಿದ ಬಳಿಕ ಮಾತನಾಡಿದ ಸ್ಪರ್ದಿಗಳು , ಇಂತಹವೊಂದು ಸರ್ಪ್ರೈಸ್ ಅನ್ನು ಕ್ರಿಯೆಟ್ ಮಾಡೋಕೆ ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಒಟ್ನಲ್ಲಿ ಕಿಚ್ಚನ ಕೈ ರುಚಿಗೆ ಮನೆ ಮಂದಿ ಕಳೆದು ಹೋಗಿರೋದು ಗ್ಯಾರಂಟಿ.
ಇದೀಗ ಚೈತ್ರಾ ಕುಂದಾಪುರ, ರಜತ್, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ ಬಿಗ್ ಬಾಸ್ ಆಟದ ರೇಸ್ನಲ್ಲಿದ್ದಾರೆ. ಯಾರಿಗೆ ‘ಬಿಗ್ ಬಾಸ್’ ಗೆಲುವಿನ ಪಟ್ಟ ಸಿಗಲಿದೆ ಕಾದುನೋಡಬೇಕಿದೆ
https://www.instagram.com/reel/DEXUYprPObf/?igsh=OWpzMHVzcjBmMmth