Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Big Boss Kannada 11 ಬಿಗ್ ಬಾಸ್ ವೇದಿಕೆಯಲ್ಲಿಂದು ಕಾಣಿಸಿಕೊಳ್ಳಲಿದ್ದಾರೆ ಗೋಲ್ಡ್ ಸುರೇಶ್: ಕಿಚ್ಚ ಏನಂದ್ರು?
ಕರ್ನಾಟಕಪ್ರಮುಖಮನರಂಜನೆ

Big Boss Kannada 11 ಬಿಗ್ ಬಾಸ್ ವೇದಿಕೆಯಲ್ಲಿಂದು ಕಾಣಿಸಿಕೊಳ್ಳಲಿದ್ದಾರೆ ಗೋಲ್ಡ್ ಸುರೇಶ್: ಕಿಚ್ಚ ಏನಂದ್ರು?

Share
2 Min Read
SHARE

newsics.com

ಬಿಗ್ ಬಾಸ್ ಕನ್ನಡ 11– ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದ ಗೋಲ್ಡ್ ಸುರೇಶ್ ಮತ್ತೆ ಕಾಣಿಸಿಕೊಂಡಿದ್ದಾರೆ. ಮತ್ತೆ ಕರೆದರೆ ನಾನು ಮನೆಯೊಳಗೆ ಹೋಗುತ್ತೇನೆ ಎಂದು ಹಲವು ಸಂದರ್ಶನಗಳಲ್ಲಿ ಗೋಲ್ಡ್ ಸುರೇಶ್ ಹೇಳಿದ್ದರು. ಅದರಂತೆ ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ್ ಕಾರ್ಯಕ್ರಮದಲ್ಲಿ ಗೋಲ್ಡ್ ಸುರೇಶ್ ಕಾಣಿಸಿಕೊಂಡಿದ್ದಾರೆ.

ಕಳೆದ ವಾರ ಅವರು ವೈಯಕ್ತಿಕ ಸಮಸ್ಯೆಗಳ ಕಾರಣ, ಬಿಸಿನೆಸ್‌‌ನಲ್ಲಿ ಸಮಸ್ಯೆ ಆಗಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರ ಬಂದಿದ್ದರು. ಹೀಗಾಗಿ ಕಿಚ್ಚನ ಬಳಿ ಮಾತನಾಡಲು ಆಗಿರಲಿಲ್ಲ. ಈ ಕಾರಣಕ್ಕೆ ಇಂದಿನ ಎಪಿಸೋಡ್‌‌ನಲ್ಲಿ ಅವರು ಬಿಗ್‌ಬಾಸ್‌ ಮನೆಯೊಳಗಿದ್ದ ಅನುಭವ ಮತ್ತು ವೇದಿಕೆಯಿಂದ ಗೌರವದಿಂದ ಬೀಳ್ಕೊಡಲು ಕರೆಯಲಾಗಿದೆ.

ಈ ಸಂಬಂಧ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದ್ದು, ಮನೆಯೊಳಗಡೆ ನೀವಿಲ್ಲದೆ ಒಂದು ಜಾಗ ಫುಲ್‌ ಖಾಲಿ ಹೊಡೆಯುತ್ತಿದೆ ಎಂದು ಕಿಚ್ಚ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುರೇಶ್, ಈ ಕ್ಷಣಕ್ಕೂ ಒಳಗಡೆ ಹೋಗು ಅಂದ್ರೆ ಖುಷಿಯಾಗಿ ಹೋಗ್ತೀನಿ ಸರ್‌ ಎಂದಿದ್ದಾರೆ.

ಈ ಮಧ್ಯೆ ಗೋಲ್ಡ್ ಸುರೇಶ್ ಧರಿಸಿದ್ದ ಚಿನ್ನ ನಕಲಿ ಎಂಬ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇನ್ನು ಈ ವಾರ ಮನೆಯಿಂದ ಹೊರಹೋಗಲು ತ್ರಿವಿಕ್ರಮ್, ರಜತ್, ಹನುಮಂತ, ಐಶ್ವರ್ಯಾ ಮತ್ತು ಮೋಕ್ಷಿತಾ ನಾಮಿನೇಟ್‌ ಆಗಿದ್ದರು. ತ್ರಿವಿಕ್ರಮ್ ತಂಡಕ್ಕಾಗಿ ಔಟ್‌ ಆಗಿದ್ದನ್ನು ಶನಿವಾರದ ಎಪಿಸೋಡ್‌ ನಲ್ಲಿ ಪ್ರಶ್ನಿಸಿದ ಕಿಚ್ಚ, ತ್ರಿವಿಕ್ರಮ್ ಅವರೇ ನಿಮಗೆ ಅಷ್ಟೊಂದು ಕಾನ್ಫಿಡೆನ್ಸ್ ಇದೆಯಾ ಉಳಿದುಕೊಳ್ಳುತ್ತೇನೆಂದು ಎಂದರು.

ಸ್ಪರ್ಧಿಗಳಲ್ಲಿ ಹಲವರಿಗೆ ತ್ರಿವಿಕ್ರಮ್ ಸ್ವಯಂ ನಾಮಿನೇಟ್‌ ಆಗಿದ್ದು ಇಷ್ಟವಿರಲಿಲ್ಲ. ರಜತ್‌ ತ್ಯಾಗರಾಜ ಆಗಬೇಡ ಎಂದು ನೇರವಾಗಿಯೇ ವಿಕ್ರಂಗೆ ಹೇಳಿದ್ದರು. ಕಿಚ್ಚ ಕೂಡ ನಿನ್ನೆಯ ಎಪಿಸೋಡ್‌ ನಲ್ಲಿ ಈ ಸಂಬಂಧ ಕ್ಲಾಸ್‌ ತೆಗೆದುಕೊಂಡಿದ್ದರು.

ಇಂದಿನ ಎಪಿಸೋಡ್‌ನಲ್ಲಿ ಎಲ್ಲರನ್ನೂ ಸೇವ್‌ ಮಾಡಿದ ಕಿಚ್ಚ, ಕೊನೆಗೆ ತ್ರಿವಿಕ್ರಮ್ ಅವರನ್ನು ಎಲಿಮಿನೇಟ್ ಆಗಿದ್ದೀರಿ ಎಂದಿದ್ದಾರೆ. ಮನೆಮಂದಿ ಎಲ್ಲಾ ಶಾಕ್ ಆಗಿರುವುದಂತೂ ಸತ್ಯ. ಮನೆಯ ಮುಖ್ಯದ್ವಾರದವರೆಗೆ ತ್ರಿವಿಕ್ರಮ್‌ ಅವರನ್ನು ಕರೆದು ಫ್ರಾಂಕ್‌ ಮಾಡಿ ಈ ವಾರ ನೋ ಎಲಿಮಿನೇಶನ್‌ ವೀಕ್‌ ಎಂದು ಕಿಚ್ಚ ಬುದ್ಧಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಇನ್ನು ನಾಲ್ಕು ವಾರದಲ್ಲಿ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಯಾರು ಎಲಿಮಿನೇಟ್‌ ಆಗ್ತಾರೆ. ಯಾರು ಟಾಪ್‌ 5 ರಲ್ಲಿ ಇರುತ್ತಾರೆ. ಯಾರು 50 ಲಕ್ಷ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

TAGGED:Gold Suresh to appear on Bigg Boss stage today: What did Kiccha say?
Share This Article
Facebook Twitter Copy Link Print
Previous Article Actor allu arjun ತೆಲುಗು ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ
Next Article Mandya sammelana ಮೂರು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಕನ್ನಡ ಭಾಷಾಭಿವೃದ್ಧಿ ಸೇರಿ 6 ನಿರ್ಣಯ ಮಂಡನೆ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?