newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಮಾಸ ಕೃಷ್ಣ ಪಕ್ಷ ಏಕಾದಶಿ
26-11-2024, ಮಂಗಳವಾರ
* ಉತ್ಪತ್ತಿ ಅಥವಾ ಉತ್ಪನ್ನ ಏಕಾದಶಿ
* ಭಾರತದ ಸಂವಿಧಾನ ದಿನ
* ಲಕ್ಷ ದೀಪೋತ್ಸವ, ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ, ಬೆಳಗಾವಿ
* ಬಾಬಾ ಮಹಾರಾಜ ಪುಣ್ಯತಿಥಿ, ಜತ್ರಾಟ, ಬೆಳಗಾವಿ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 26/11/2024
ತಿಂಗಳು – ನವೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ಏಕಾದಶಿ 27:47:01*
ಪಕ್ಷ – ಕೃಷ್ಣ
ನಕ್ಷತ್ರ – ಹಸ್ತಾ 28:33:43*
ಯೋಗ – ಪ್ರೀತಿ 14:12:28
ಕರಣ – ಭವ 14:24:30
ಕರಣ – ಬಾಳವ 27:47:01
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು
ಸೂರ್ಯೋದಯ 06:24:46
ಸೂರ್ಯಾಸ್ತ 17:49:16
ಹಗಲಿನ ಅವಧಿ 11:24:29
ರಾತ್ರಿಯ ಅವಧಿ 12:36:01
ಚಂದ್ರೋದಯ 27:01:41*
ಚಂದ್ರಾಸ್ತ 14:30:29
ರಾಹು ಕಾಲ 14:58 – 16:24 ಅಶುಭ
ಯಮಘಂಡ ಕಾಲ 09:16 – 10:41 ಅಶುಭ
ಗುಳಿಕ ಕಾಲ 12:07 – 13:33
ಅಭಿಜಿತ್ 11:44 – 12:30 ಶುಭ
ದುರ್ಮುಹೂರ್ತ 08:42 – 09:27 ಅಶುಭ
ದುರ್ಮುಹೂರ್ತ 22:51 – 23:37 ಅಶುಭ
—
ಇಂದಿನ ಮಾತು
ಕೋಪ ಮತ್ತೆ ಪ್ರೀತಿ – ಇವೆರಡನ್ನು ನಾವು ಇಷ್ಟ ಪಟ್ಟವರ ಮೇಲೆಯೇ ತೋರಿಸ್ತೀವಿ. ಆದರೆ, ಇದನ್ನು ನಮ್ಮವರು ಎನಿಸಿಕೊಂಡವರು ಅರ್ಥ ಮಾಡಿಕೊಂಡ್ರೆ, ಬದುಕು ಹಿತವಾಗಿರುತ್ತೆ. ಅಪಾರ್ಥ ಮಾಡಿಕೊಂಡ್ರೆ ಹಿಂಸೆಯಾಗಿ ಬಿಡುತ್ತೆ.
—
ಇಂದಿನ ಸುಭಾಷಿತ
ಯತೇರ್ವಿರಜ್ಯಾತ್ಮಗತಿಃ ಕಲತ್ರಂ
ದೇಹಂ ಗೃಹಂ ಸಂಯತಮೇವ ಸೌಖ್ಯಮ್ |
ವಿರಕ್ತಿಭಾಜಸ್ತನಯಾಃ ಸ್ವಶಿಷ್ಯಾಃ
ಕಿಮರ್ಥನೀಯಂ ಯತಿನೋ ಮಹಾತ್ಮನ್ ||
(ಶ್ರೀಮಾಧವೀಯ ಶಂಕರ ದಿಗ್ವಿಜಯಃ)
ವೈರಾಗ್ಯದಿಂದ ಯತಿಯಾದವನಿಗೆ ಆತ್ಮಜ್ಞಾನವೇ ಮಡದಿ, ದೇಹವೇ ಗೃಹ. ಸಮಾಧಿಯಲ್ಲಿರುವುದೇ ಸೌಖ್ಯ. ಈ ವಿರಕ್ತರಿಗೆ ತಮ್ಮ ಶಿಷ್ಯರೇ ಮಕ್ಕಳು. ಓ ಮಹಾತ್ಮ, ಯತಿಗೆ ಇನ್ನೇನು ಬೇಕಾಗಿದೆ?
🌷🌺🌺🌷